ಹೆಚ್‍ಡಿಡಿ ವಿರುದ್ಧ ರಫ್&ಟಫ್ ವರ್ತನೆ ಬೇಡ- ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

– ದೇವೇಗೌಡರ ನಿವಾಸಕ್ಕೆ ಪಿಯೂಶ್ ಗೋಯಲ್ ಭೇಟಿ ಹಿಂದೆ ಗರಿಗೆದರಿದ ಕುತೂಹಲ
– ಮೋದಿಯನ್ನು ಟೀಕಿಸಬೇಡಿ ಎಂದಿರುವ ಹೆಚ್‍ಡಿಡಿ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ರಫ್ ಆಂಡ್ ಟಫ್ ವರ್ತನೆ ಬೇಡ ಎಂದು ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಅಂತ ಹೇಳಲಾಗಿದೆ.

ದೇವೇಗೌಡ, ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವೈಯುಕ್ತಿಕ ಟೀಕೆಗಳನ್ನು ಮಾಡಬೇಡಿ. ನಮ್ಮ ಟಾರ್ಗೆಟ್ ಕಾಂಗ್ರೆಸ್, ಆದ್ದರಿಂದ ಕಾಂಗ್ರೆಸ್ ವಿರುದ್ಧವೇ ನಮ್ಮ ಅಸ್ತ್ರವಾಗಿರಬೇಕು. ರಾಜಕೀಯವಾಗಿ ಜೆಡಿಎಸ್ ಪಕ್ಷವನ್ನು ಎಷ್ಟು ಎದುರಿಸಬೇಕೋ ಅಷ್ಟು ಎದುರಿಸಿ. ಆದರೆ ಯಾವುದೇ ಕಾರಣಕ್ಕೂ ರಫ್ ಆಂಡ್ ಟಫ್ ಆಗಿ ವರ್ತನೆ ತೋರಬಾರದು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಆದೇಶವನ್ನು ನೀಡಿದೆ ಎನ್ನಲಾಗಿದೆ.

ಗುರುವಾರ ದೆಹಲಿಯಲ್ಲಿ ದೇವೇಗೌಡರ ನಿವಾಸಕ್ಕೆ ಕೇಂದ್ರ ರೈಲ್ವೇ ಸಚಿವ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಶ್ ಗೋಯಲ್ ಸ್ವಯಂಪ್ರೇರಿತರಾಗಿ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಗರಿಗೆದರಿಸಿದೆ.

ಈ ನಡುವೆ ಮೋದಿಯನ್ನು ಟೀಕಿಸಬೇಡಿ ಎಂದು ಜೆಡಿಎಸ್ ಶಾಸಕರಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ ಅಂತ ಹೇಳಲಾಗಿದೆ. ಈ ಎಲ್ಲಾ ಬೆಳವಣಿಗೆಗಳು 2018ರ ಚುನಾವಣೆಗೆ ಅಚ್ಚರಿಯ ರಾಜಕಾರಣದ ತಂತ್ರ ಕಾದಿದ್ಯಾ ಎಂಬ ಪ್ರಶ್ನೆ ಮೂಡಿಸಿದೆ.

Comments

Leave a Reply

Your email address will not be published. Required fields are marked *