ಆಪರೇಷನ್ 2 ಇಲ್ಲ, ತಾವಾಗಿಯೇ ಹಲವರು ಪಕ್ಷಕ್ಕೆ ಬರ್ತಿದ್ದಾರೆ- ಉಮೇಶ್ ಜಾಧವ್

ಕಲಬುರಗಿ: ರಾಜ್ಯದಲ್ಲಿ ಆಪರೇಷನ್ ಕಮಲ ಪಾರ್ಟ್-2 ಇಲ್ಲ, ತಾವಾಗಿಯೇ ಇನ್ನೂ ಹಲವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಸಂಸದ ಉಮೇಶ್ ಜಾಧವ್ ಇನ್ನೂ ಹಲವು ಶಾಸಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿ ಪಕ್ಷಕ್ಕೆ ಬರುತ್ತಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಎಲ್ಲಾ ಪಾರ್ಟಿ ಕ್ಲೀನ್ ಆಗಿದೆ. ಬಹುತೇಕರು ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ರಾಜ್ಯ ರಾಜಕೀಯದ ಕುರಿತು ಜಾಧವ್ ಭವಿಷ್ಯ ನುಡಿದಿದ್ದಾರೆ.

ಅಮಿತ್ ಶಾ ಅವರ ಒಂದು ದೇಶ ಒಂದೇ ಭಾಷೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೂ ಯಾವುದೇ ಭಾಷೆಯನ್ನು ಯಾರ ಮೇಲು ಹೇರಬಾರದು. ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡುತ್ತೇವೆ. ಅವರ ನಿಲುವು ಏನು ಎಂದು ಸಹ ತಿಳಿದುಕೊಳ್ಳುತ್ತೆವೆ. ಅಮಿತ್ ಶಾ ಅವರು ಒಂದು ರಾಷ್ಟ್ರೀಯ ಭಾಷೆ ಇರಬೇಕೆಂದು ಹೇಳಿರುತ್ತಾರೆ. ಆದರೆ, ಬೇರೆ ಭಾಷೆ ಬೇಡ ಎಂದು ಹೇಳಿಲ್ಲ. ಅವರ ಒಂದು ದೇಶ ಒಂದು ಭಾಷೆಯ ಹೇಳಿಕೆ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿಲ್ಲ. ಅದನ್ನು ಪೂರ್ತಿ ನೋಡಿಲ್ಲ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ ಎಂದರು.

Comments

Leave a Reply

Your email address will not be published. Required fields are marked *