ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್‌ನಲ್ಲಿ ಯಾರಿಗೂ ಇಲ್ಲ: ಕಂಗನಾ ರಣಾವತ್

ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಸಖತ್ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟ ನಟಿಯರ ಮೇಲೆ ಯಾವಾಗಲೂ ಅವರು ಆರೋಪ ಮಾಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಸ್ಟಾರ್ ಮಕ್ಕಳ ಬಗ್ಗೆ ಕಟುವಾಗಿ ಟೀಕಿಸಿದ್ದ ಕಂಗನಾ, ಇದೀಗ ನಟರ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

ಸದ್ಯ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ಹಲವಾರು ಸಂದರ್ಶನಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಅಂತಹ ಇಂಟರ್‌ವ್ಯೂ ಒಂದರಲ್ಲಿ ಕೇಳಲಾದ ಪ್ರಶ್ನೆಗೆ ಬಾಲಿವುಡ್ ನಟ ನಟಿಯರನ್ನು ಅರ್ಹತೆ ಇಲ್ಲದವರು ಎಂದು ಕರೆದಿದ್ದಾರೆ. ಆ ಮಾತು ಸಖತ್ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

ಸಂದರ್ಶನದಲ್ಲಿ ನಿಮ್ಮ ಮನೆಗೆ ಮೂವರನ್ನು ಊಟಕ್ಕೆ ಕರೆಯುವುದಾದರೆ, ಯಾರನ್ನು ಕರೆಯುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ಕಂಗನಾ, ‘ನಮ್ಮ ಮನೆಗೆ ಕರೆಯಿಸಿಕೊಳ್ಳುವಂತಹ ಯೋಗ್ಯತೆ ಬಾಲಿವುಡ್‌ನಲ್ಲಿ ಯಾರಿಗೂ ಇಲ್ಲ. ಆಚೆ ಬೇಕಾದರೆ, ಅವರನ್ನು ಭೇಟಿ ಮಾಡಬಹುದು. ಆದರೆ, ಮನೆಗೆ ಕರೆಯಲಾರೆ’ ಎಂದು ಖಡಕ್ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಅದು ಬಾಲಿವುಡ್ ಸಿಲೆಬ್ರಿಟಿಗಳನ್ನು ಕಣ್ಣು ಕೆಂಪಾಗಿಸಿದೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

ಈ ಹಿಂದೆ ʼದಿ ಕಾಶ್ಮೀರ್ ಫೈಲ್ಸ್ʼ ಸಿನಿಮಾ ಬಂದಾಗಲೂ ಬಾಲಿವುಡ್ ಮಂದಿಗೆ ಸರಿಯಾದ ರೀತಿಯಲ್ಲೇ ಪ್ರಶ್ನೆ ಕೇಳಿದ್ದರು. ಈ ಸಿನಿಮಾದ ಬಗ್ಗೆ ಮಾತನಾಡುವಂತಹ ತಾಕತ್ತು ಯಾರಿಗೂ ಇಲ್ಲ. ಹಾಗಾಗಿ ನಾನೇ ಮಾತನಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದರು. ಕಂಗನಾ ಈ ಸ್ಟೇಟ್‌ಮೆಂಟ್‌ ಕೊಟ್ಟ ನಂತರ ಅನೇಕ ಬಾಲಿವುಡ್ ಕಲಾವಿದರು ಮಾತನಾಡಿದ್ದರು.

Comments

Leave a Reply

Your email address will not be published. Required fields are marked *