ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿಯವ್ರಿಗೆ ಇಲ್ಲ- ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹೋಗಿ ಮಾತನಾಡುವ ತಾಕತ್ ಬಿಜೆಪಿಯವರಿಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ 3 ಸಿಎಂಗಳು ಅನ್ನೋ ಬಿಜೆಪಿ ಟ್ವೀಟ್ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯವರಿಗೆ ಈ ಸರ್ಕಾರದ ಬಗ್ಗೆ ಮಾತಾಡೋಕೆ ನೈತಿಕತೆ ಇಲ್ಲ. ಹತಾಶೆಯಿಂದಾಗಿ ಬಿಜೆಪಿಯವರು ಹೀಗೆ ಮಾತಾಡ್ತಿದ್ದಾರೆ. ರಾಜ್ಯಪಾಲರನ್ನ, ಕೇಂದ್ರ ಸರ್ಕಾರವನ್ನ ದುರುಪಯೋಗ ಪಡಿಸಿಕೊಂಡಿದ್ರು. ಅಧಿಕಾರಕ್ಕಾಗಿ ಹಿಂದೆ ಬಾಗಿಲಿನಿಂದ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಎಲ್ಲಾ ಆಟಗಳನ್ನ ಜನ ನೋಡಿದ್ದಾರೆ ಅಂತ ಅವರು ತಿಳಿಸಿದ್ರು.

ಪ್ರಧಾನಿ ಮೋದಿ ಬಳಿ ಮಾತನಾಡೋ ತಾಕತ್ ಬಿಜೆಪಿ ಅವರಿಗಿಲ್ಲ. ಹೀಗಾಗಿ ನಮ್ಮ ಬಗ್ಗೆ ಮಾತಾಡುತ್ತಾರೆ. ಬಿಜೆಪಿಯವರು ನಮ್ಮನ್ನ ಪ್ರಶಂಸೆ ಮಾಡೋದು ಬೇಡ ಅಂತ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

ಸಹಾಯವಾಣಿ ಆರಂಭ:
ಸಮಾಜ ಕಲ್ಯಾಣ ಇಲಾಖೆಯ ದೂರುಗಳನ್ನ ಆಲಿಸಲು ಸಹಾಯವಾಣಿ ಆರಂಭ ಮಾಡಿದ್ದೇವೆ. ದೇಶದಲ್ಲೆ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಮಾಡಿದ್ದೇವೆ. ಪೈಲಟ್ ಪ್ರಾಜೆಕ್ಟ್ ನಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ವಿಸ್ತರಣೆ ಮಾಡಿದ್ದೇವೆ. ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನ ಸಹಾಯವಾಣಿಯ ಮೂಲಕ ನೀಡಬಹುದು ಅಂತ ಅವರು ವಿವರಿಸಿದ್ರು.

Comments

Leave a Reply

Your email address will not be published. Required fields are marked *