ನಮ್ಮೂರಿಗೆ ಬಿಜೆಪಿ, ಆರ್‌ಎಸ್‌ಎಸ್ ನವರು ಬರುವಂತಿಲ್ಲ- ಗ್ರಾಮದ ಎಂಟ್ರೆನ್ಸ್ ನಲ್ಲಿ ರಾರಾಜಿಸ್ತಿದೆ ಬ್ಯಾನರ್!

ಕಲಬುರಗಿ: ನಮ್ಮ ಗ್ರಾಮಕ್ಕೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನವರು ಬರುವಂತಿಲ್ಲ ಎಂಬ ಬ್ಯಾನರೊಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮದಲ್ಲಿ ರಾರಾಜಿಸುತ್ತಿದೆ.

ಬೆಳಮಗಿ ಗ್ರಾಮದ ದಲಿತರ ಕಾಲೋನಿಯಲ್ಲಿ ಈ ಬ್ಯಾನರ್ ಕಂಡುಬರುತ್ತಿದ್ದು, ಸಂವಿಧಾನ ವಿರೋಧಿಸುವ, ಅಂಬೇಡ್ಕರ್ ಅವರಿಗೆ ಅವಮಾನಿಸುವ ಬಿಜೆಪಿಗೆ ಎಂಟ್ರಿ ಇಲ್ಲ ಅಂತ ಬ್ಯಾನರ್ ನಲ್ಲಿ ಬರೆಯಲಾಗಿದೆ.

ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಅವರು ಇತ್ತೀಚೆಗೆ ಬಿಜೆಪಿ ತೊರೆದು ಜೆಡಿಎಸ್ ಸೇರಿದ ಎಫೆಕ್ಟಾ ಎಂಬ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

Comments

Leave a Reply

Your email address will not be published. Required fields are marked *