ನಮ್ಮ ಮಂಡ್ಯದಲ್ಲೇ ಹೆಣ್ಣು ಸಿಕ್ಕಿದ್ರೂ ಮದ್ವೆ ಆಗ್ತೀನಿ: ನಿಖಿಲ್

ಮಂಡ್ಯ: ಮನೆಯಲ್ಲಿ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದಾರೆ. ಮಂಡ್ಯದಲ್ಲೇ ಹೆಣ್ಣು ಸಿಕ್ಕರೆ ಮದುವೆ ಆಗುತ್ತೇನೆ ಎಂದು ಮೃತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್, 25 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಎಲ್ಲ ಕಾರ್ಯಕರ್ತರು ಬಂದು ನನಗೆ ಆಶೀರ್ವದಿಸಿ ಬೆಂಬಲಿಸಬೇಕು. ಮಂಡ್ಯ ಜಿಲ್ಲೆಯ ಜನರು ಕೂಡ ಬಂದು ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡರು. ಯಾರೂ ಯಾರ ಬಗ್ಗೆಯೂ ವ್ಯಯಕ್ತಿಕವಾಗಿ ಮಾತನಾಡಬೇಡಿ. ಇದು ಒಳ್ಳೆಯದಲ್ಲ. ಜನರ ತೀರ್ಪೆ ಅಂತಿಮವಾಗಿದೆ ಎಂದು ಹೇಳಿದರು.

ನಿಖಿಲ್ ಅವರು ಮಂಡ್ಯ ಅಳಿಯ ಆಗ್ತಾರೆ ಎಂದು ಶಾಸಕ ಸುರೇಶ್ ಗೌಡ ಅವರು ಹೇಳಿದ್ದರು. ಈ ಬಗ್ಗೆ ನಿಖಿಲ್ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದರು ಗೊತ್ತಿಲ್ಲ. ಅವರನ್ನೇ ಕೇಳುತ್ತೇನೆ. ನಮ್ಮ ತಂದೆ-ತಾಯಿ ಮದುವೆ ಮಾಡಬೇಕು ಎಂದು ಹೆಣ್ಣು ಹುಡುಕುತ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಸಿಕ್ಕಿದ್ರೂ ಮದುವೆ ಆಗುತ್ತೀನಿ ಎಂದು ಹೇಳಿದ್ರು.

ನಾನು ಮತ್ತು ಅಭೀಷೇಕ್ ಅವರು ಯಾವಾಗಲೂ ಸಹೋದರರಂತೆ ಇರುತ್ತೇವೆ. ರಾಜಕೀಯದಿಂದ ಸಂಬಂಧ ಹಾಳಾಗುವುದಿಲ್ಲ. ಪಕ್ಷದ ನಾಯಕರು ಕೇವಲ ಅಭಿವೃದ್ಧಿ ವಿಚಾರವಾಗಿ ಮಾತನಾಡಬೇಕು. ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ನಿಖಿಲ್ ಇದೇ ವೇಳೆ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *