ನಿಶ್ಚಯವಾದಂತೆ ಏಪ್ರಿಲ್ 17ರಂದೇ ನಿಖಿಲ್, ರೇವತಿ ಮದ್ವೆ – ಕುಟುಂಬಸ್ಥರಷ್ಟೇ ಭಾಗಿ

ರಾಮನಗರ: ಪುತ್ರ ನಿಖಿಲ್ ಹಾಗೂ ರೇವತಿ ವಿವಾಹ ಕಾರ್ಯ ಪೂರ್ವ ನಿಗದಿಯಂತೆ ಏಪ್ರಿಲ್ 17ರಂದೇ ಬೆಂಗಳೂರಿನ ಮನೆಯ ಬಳಿ ಎರಡು ಕುಟುಂಬಸ್ಥರ ನಡುವೆ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದ್ದಾರೆ.

ರಾಮನಗರ ಹೊರವಲಯದ ಜನಪದ ಲೋಕದ ಬಳಿ ನಿಖಿಲ್-ರೇವತಿ ವಿವಾಹ ಕಾರ್ಯವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಮದುವೆ ಸಿದ್ಧತಾ ಕಾರ್ಯಗಳು ಸ್ಥಗಿತಗೊಂಡಿದ್ದವು. ಅಲ್ಲದೇ ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಮದುವೆ ಕಾರ್ಯ ನಡೆಸಲಾಗುತ್ತೆ ಎನ್ನಲಾಗಿತ್ತು.

ಇದೀಗ ಎಚ್‍ಡಿಕೆಯವರು ಮಗನ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪೂರ್ವ ನಿಗದಿಯಂತೆ ಏಪ್ರಿಲ್ 17ರಂದೇ ಶುಭದಿನವಾಗಿದ್ದು, ಬೆಂಗಳೂರಿನ ಮನೆಯ ಬಳಿ ಎರಡು ಕುಟುಂಬಸ್ಥರಷ್ಟೇ 15ರಿಂದ 20 ಮಂದಿ ಸೇರಿಕೊಂಡು ಮದುವೆ ಕಾರ್ಯ ನಡೆಸುತ್ತೇವೆ. ಮುಂದೆ ಅವಕಾಶ ಸಿಕ್ಕರೇ ರಾಮನಗರದಲ್ಲಿ ಒಂದು ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *