ಗಂಗಾ ನದಿಯಲ್ಲಿ ತ್ಯಾಜ್ಯ ಹಾಕಿದ್ರೆ 50 ಸಾವಿರ ದಂಡ

ನವದೆಹಲಿ: ಗಂಗಾ ನದಿ ದಂಡೆಯಿಂದ 500 ಮೀಟರ್ ದೂರದಲ್ಲಿ ಕಸ-ಕಡ್ಡಿ ಇನ್ನಿತರ ತ್ಯಾಜ್ಯ ವಸ್ತುಗಳನ್ನ ಸುರಿಯುವುದನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರು ನ್ಯಾಯಧಿಕರಣ(ಎನ್‍ಜಿಟಿ) ಉಲ್ಲಂಘಿಸಿದವರಿಗೆ 50 ಸಾವಿರ ದಂಡ ವಿಧಿಸಲು ಗುರುವಾರ ಮಹತ್ವದ ಸೂಚನೆ ಸೂಚಿಸಿದೆ.

ಗಂಗಾ ನದಿ ತಟದ ಉನ್ನಾವ್ ಮತ್ತು ಹರಿದ್ವಾರಗಳಲ್ಲಿ ನದಿಯ ದಡದಲ್ಲಿ ಕಸ ಹಾಕುವುದನ್ನು ತಡೆಯಬೇಕೆಂದು ಹಸಿರು ನ್ಯಾಯಪೀಠ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದೆ.

ಗಂಗಾ ನದಿ ಸಮೀಪದಲ್ಲಿರುವ ಚರ್ಮ ಸಂಸ್ಕರಣಾ ಘಟಕಗಳನ್ನು ಆರು ವಾರದ ಒಳಗಡೆ ಸ್ಥಳಾಂತರಿಸುವಂತೆ ನ್ಯಾಯಪೀಠವು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೆ, ಗಂಗಾ ನದಿ ದಂಡೆ ಅಸುಪಾಸು 100 ಮೀಟರ್ ಅಂತರ ಯಾವುದೇ ಅಭಿವೃದ್ಧಿ ಕೆಲಸ ಮಾಡುವಂತಿಲ್ಲ ಎಂದು ನ್ಯಾಯಪೀಠ ಸೂಚಿಸಿದೆ.

ಈ ಗಂಗಾ ನದಿ ತೀರದಲ್ಲಿರುವ ಘಾಟ್ ಮತ್ತು ಪವಿತ್ರ ಸ್ಥಳಗಳಲ್ಲಿ ನದಿಗೆ ಯಾವುದೇ ರೀತಿ ಹಾನಿಯಾಗದಂತೆ ಧಾರ್ಮಿಕ ಆಚರಣೆಗಳನ್ನು ನಡೆಸಲು ಹಸಿರು ನ್ಯಾಯಾಧಿಕರಣವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.

Comments

Leave a Reply

Your email address will not be published. Required fields are marked *