4 ತಿಂಗ್ಳ ಹಿಂದೆ ಟೆಕ್ಕಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಸ್ಪದ ಸಾವು

ರಾಮನಗರ: ಅನುಮಾನಸ್ಪದ ರೀತಿಯಲ್ಲಿ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ನವ ವಿವಾಹಿತೆ ಪವಿತ್ರ(25) ಮೃತ ದುರ್ದೈವಿ. ನಾಲ್ಕು ತಿಂಗಳ ಹಿಂದೆ ಚನ್ನಪಟ್ಟಣ ತಾಲೂಕಿನ ದೇವರ ಹೊಸಳ್ಳಿ ಗ್ರಾಮದ ನಿವಾಸಿ ಟೆಕ್ಕಿ ಹರ್ಷಿತ್ ಜೊತೆ ಮೃತ ಪವಿತ್ರಾಳ ಮದುವೆಯಾಗಿತ್ತು. ಮೃತ ಪವಿತ್ರ ಎಂಎ, ಬಿ.ಎಡ್ ಮಾಡಿದ್ದಾರೆ. ಇನ್ನು ಪತಿ ಟೆಕ್ಕಿ ಆಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಪವಿತ್ರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಪತಿ ಹರ್ಷಿತ್, ಅತ್ತೆ ಸರೋಜಮ್ಮ ಮತ್ತು ಮಾವ ರಾಮಕೃಷ್ಣಯ್ಯ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಶುಕ್ರವಾರ ರಾತ್ರಿ ವಿಷದ ಮಾತ್ರೆಯನ್ನು ಬಲವಂತವಾಗಿ ಸೇವಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಮೃತ ಪವಿತ್ರಾಳ ಪೋಷಕರು ಆರೋಪಿಸುತ್ತಿದ್ದಾರೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *