ವಿಜಯಪುರ: ಹೆಣ್ಣು ಮಗು ಅನ್ನುವ ಕಾರಣಕ್ಕೆ ನವಜಾತ ಹೆಣ್ಣು ಶಿಶುವೊಂದನ್ನ ತಾಯಿಯೊಬ್ಬಳು ಬಿಸಾಡಿ ಹೋದ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ಕಡಣಿ ಗ್ರಾಮದ ಸರಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಮಹಾತಾಯಿಯೊಬ್ಬಳು ಹೆಣ್ಣು ಅನ್ನುವ ಕಾರಣಕ್ಕೆ ಬೀಸಾಡಿ ಹೋಗಿದ್ದಾಳೆ. ಅದೇ ಆಸ್ಪತ್ರೆಯ ಹಿಂದುಗಡೆ ಮಗುವನ್ನ ಎಸೆದಿದ್ದಾಳೆ.
ಆಸ್ಪತ್ರೆಯ ಹಿಂದುಗಡೆ ಹೋಗುತ್ತಿದ್ದವರು ಮಗು ಅಳುತ್ತಿರುವುದನ್ನು ಕೇಳಿ ಬಳಿಕ ಮಗುವನ್ನು ರಕ್ಷಿಸಿದ್ದಾರೆ. ನಂತರ ಮಗುವನ್ನ ಎತ್ತಿಕೊಂಡು ಬಂದು ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಗುರುವಾರ ಮಗು ಜನಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply