‘ಮಿತ್ರ’ರ ಹೊಸ ಆಟ, ಬಿಎಸ್‍ವೈಗೆ ಸಂಕಟ!

ಬೆಂಗಳೂರು: ಉಪ ಚುನಾವಾಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಮಿತ್ರಮಂಡಳಿ ಹೊಸ ಪ್ಲಾನ್ ರಚಿಸಿಕೊಂಡಿದೆ. ಮಿತ್ರರ ಹೊಸ ಆಟ ಬಿ.ಎಸ್.ಯಡಿಯೂರಪ್ಪರನ್ನ ಸಂಕಟಕ್ಕೆ ತಂದೊಡ್ಡಿದೆ ಎಂದು ತಿಳಿದು ಬಂದಿದೆ.

ಹೊಸ ದಾಳ ಉರುಳಿಸಿರುವ ಮಿತ್ರಮಂಡಳಿ, ಸೋತವರಿಗೂ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಚುನಾವಣೆಯಲ್ಲಿ ಸೋತ ಮಿತ್ರರಾದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಸ್ಪರ್ಧೆಯಿಂದ ಹಿಂದೆ ಸರಿದ ಆರ್.ಶಂಕರ್ ಗೂ ಸಚಿವ ಸ್ಥಾನ ಕೊಡಲೇಬೇಕು. ಮಿತ್ರಮಂಡಳಿಯ ಹೊಸ ದಾಳ ಉರುಳಿಸಿದ ಆಟದ ವೈಖರಿ ಕಂಡು ಸಿಎಂ ಸಹ ಒಂದು ಕ್ಷಣ ತಬ್ಬಿಬ್ಬು ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಏನದು ಹೊಸ ದಾಳ?
ಸೋತವರಿಗೆ ಸಚಿವ ಸ್ಥಾನ ಕೊಡಲ್ಲ ಅಂತಿದೀರಲ್ಲ, ಹಾಗಾದ್ರೆ ಲಕ್ಷ್ಮಣ ಸವದಿಗೆ ಯಾವ ಆಧಾರದಲ್ಲಿ ಸಚಿವ ಸ್ಥಾನ ಕೊಟ್ಟು ಡಿಸಿಎಂ ಮಾಡಿದಿರಿ? ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ ಮೇಲೆ ನಮ್ಮಲ್ಲೂ ಸೋತವರಿಗೆ ಮಂತ್ರಿಗಿರಿ ಕೊಡಬೇಕು. ನಮ್ಮ ತಂಡದ ಸೋತವರಿಗೆ ಯಾಕೆ ಸಚಿವ ಸ್ಥಾನ ಕೊಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಕೊಡದಿದ್ರೆ ಇಬ್ಬರು ಡಿಸಿಎಂಗಳನ್ನು, ನಾಲ್ವರು ಸಚಿವರನ್ನು ಸಂಪುಟದಿಂದ ಕೈ ಬಿಡಿ ಎಂದು ಮಿತ್ರಮಂಡಳಿಯ ಶಾಸಕರು ಸಿಎಂ ಮುಂದೆ ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *