ಮತ್ತೆ ಓಜಿಕುಪ್ಪಂ ಗ್ಯಾಂಗ್ ಹಾವಳಿ- ಹಾಡಹಗಲೇ ಗಮನಬೇರೆಡೆ ಸೆಳೆದು ದರೋಡೆ

ನೆಲಮಂಗಲ: ಟೈರ್ ಪಂಚರ್ ಮಾಡಿ ವ್ಯಕ್ತಿಯ ಗಮನ ಬೇರೆಡೆ ಸೆಳೆದು, ಕಾರಿನಲ್ಲಿದ್ದ 1.45 ಲಕ್ಷ ರೂ. ನಗದು ದೋಚಿ, ದರೋಡೆಕೋರರು ಪರಾರಿಯಾದ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ನೆಲಮಂಗಲ ಪಟ್ಟಣದ ಇಂಡಿಯನ್ ಓವರ್ಸೀಸ್ ಬ್ಯಾಂಕ್‍ನಿಂದ 1.45 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿದ್ದ ಪಾಂಡುರಂಗ ಅವರಿಗೆ ನಿಮ್ಮ ಕಾರ್ ಪಂಚರ್ ಆಗಿದೆ ಎಂದು ದರೋಡೆಕೋರರು ಹೇಳಿದ್ದರು. ಅವರ ಮಾತನ್ನು ನಂಬಿದ ಪಾಡುರಂಗ ಅವರು ಕಾರಿನಿಂದ ಕೆಳಗಿಳಿದಾಗ ದರೋಡೆಕೋರರು ಕ್ಷಣಾರ್ಧದಲ್ಲಿ ಕಾರಿನ ಗ್ಲಾಸ್ ಒಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಈ ಗ್ಯಾಂಗ್ ಓಜಿಕುಪ್ಪಂನ ಗ್ಯಾಂಗ್ ಎಂದು ಶಂಕಿಸಲಾಗಿದ್ದು, ಎರಡು ಬೈಕ್‍ಗಳಲ್ಲಿ ಬಂದ ನಾಲ್ಕು ಜನರ ತಂಡವು ಕೃತ್ಯ ಎಸೆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಈ ಗ್ಯಾಂಗ್ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಗಮನ ಬೇರೆಡೆಗೆ ಸೆಳೆಯುವ ಯುವಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *