ಟಯರ್ ಸ್ಟೋಟವಾಗಿ ಭೀಕರ ಅಪಘಾತ- ಮಗ, ಮಾವ ಸ್ಥಳದಲ್ಲೇ ಸಾವು

ನೆಲಮಂಗಲ: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಸುಮೊ ಕಾರಿನ ಟಯರ್ ಸ್ಫೋಟವಾಗಿ ಕಾರು ಮೂರು ಪಲ್ಟಿಯಾಗಿರುವ ಘಟನೆ ಸಂಭವಿಸಿದೆ.

ಮಹಮದ್ ಯೂಸುಫ್ (8), ಮಹಮದ್ ಸಾಬ್(65) ಮೃತರಾಗಿದ್ದಾರೆ. ಇವರು ಮೂಲತಃ ಕೊಪ್ಪಳದ ಗಂಗಾವತಿ ಮೂಲದವರಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿ ಈ ಅಪಘಾತ ಸಂಭವಿಸಿದೆ.

ಬೆಂಗಳೂರಿನ ಭೈರತಿಯಲ್ಲಿ ವಾಸ ಇದ್ದು, ಗಂಗಾವತಿಯಿಂದ ಮಗಳ ಮನೆಗೆ ಬಂದ್ದಿದ ತಂದೆ ಮಹಮದ್ ಸಬ್ ಜೊತೆಗೆ ಎಲ್ಲರು ಸೇರಿ ಜಾವಗಲ್ ದರ್ಗಾ ಕಡೆ ಪಯಣ ಮಾಡುತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ:  ಪ್ರಧಾನಿ ಮೋದಿಗೆ ನನ್ನ ಮೇಲೆ ಅಸೂಯೆ: ಮಮತಾ ಬ್ಯಾನರ್ಜಿ

ಕಾರು ಚಾಲಕ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಕಾರಿನಲ್ಲಿ ನನ್ನ ಕುಟುಂಬದ ಆರು ಮಂದಿ ಇದ್ದರು. ಟಯರ್ ಸ್ಟೋಟಗೊಂಡು ಕಾರು ಮೂರು ಪಲ್ಟಿಯಾಯಿತು. ನನ್ನ ಮಗ ಹಾಗೂ ಮಾವ ಸ್ಥಳದಲ್ಲಿ ಸಾವನಪ್ಪಿದ್ದಾರೆ ಎಂದು ಮೃತ ಮಗುವಿನ ತಂದೆ ಹೇಳಿಕೆ ನೀಡಿದ್ದಾರೆ. ಮೃತರ ಕುಟುಂಬದಲ್ಲಿ ಆಕ್ರಂಧನ ಮುಗಿಲು ಮುಟ್ಟಿದ್ದು, ನೆಲಮಂಗಲ ಸಂಚಾರಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *