50 ವರ್ಷಗಳಿಂದ ಕಲಾ ಆರಾಧನೆ – 12 ವಾದ್ಯ ನುಡಿಸೋ ಪ್ರವೀಣ ಹುಬ್ಬಳ್ಳಿಯ ನಾಗರಾಜ್ ಕಂಬಾರ್

ಹುಬ್ಬಳ್ಳಿ: ಆಧುನಿಕರಣದಿಂದಾಗಿ ನಾಡಿನ ಕಲೆ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಆದ್ರೆ, ಐದು ದಶಕಗಳಿಂದ ಕಲೆಯ ಉಳಿವಿಗಾಗಿ ಟೊಂಕಕಟ್ಟಿದ್ದಾರೆ ಇವತ್ತಿ ನಮ್ಮ ಪಬ್ಲಿಕ್ ಹೀರೋ ನಾಗರಾಜ್ ಕುಂಬಾರ್.

ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ನಿವಾಸಿಯಾದ 70 ವರ್ಷದ ನಾಗರಾಜ್ ಅವರು 50 ವರ್ಷಗಳಿಂದ ಕಲೆಗಾಗೇ ತಮ್ಮನ್ನ ಸಮರ್ಪಿಸಿಕೊಂಡಿದ್ದಾರೆ. ತಬಲಾ, ಡೊಳ್ಳುಖಣಿ, ಡಗ್ಗಾ , ದಪ್ಪಡ್ಡಿ, ಹಲಗೆ, ಕರಡಿ ಮಜಲು ಬ್ಯಾಂಗೋ, ಕಾಂಗೋ, ಮೃದಂಗ.. ಹೀಗೆ ಒಟ್ಟು 12ಕ್ಕೂ ಹೆಚ್ಚು ಚರ್ಮ ವಾದ್ಯಗಳನ್ನು ನುಡಿಸ್ತಿದ್ದಾರೆ.

ಆಧುನೀಕರಣದಿಂದಾಗಿ ಮರೆಯಾಗುತ್ತಿರುವ ಕಲಾ ಪ್ರಕಾರಗಳನ್ನು ಗ್ರಾಮದ ಯುವಕರಿಗೆ ಹೇಳಿಕೊಟ್ಟು ಕಲೆಯನ್ನು ಪೋಷಣೆ ಮಾಡ್ತಿದ್ದಾರೆ. ಪುರುಷರ ಜೊತೆಗೆ ಮಹಿಳೆಯರಿಗೆ ಡೊಳ್ಳು ಕರಡಿ ಮಜಲು ಕಲಿಸುತ್ತಿದ್ದಾರೆ. ಇವರು ರಾಜ್ಯ ಮತ್ತು ಅಂತರ್ ರಾಜ್ಯಗಳಲ್ಲೂ ತಮ್ಮ ಕಲಾ ಪ್ರದರ್ಶನ ಮಾಡಿಸ್ತಿದ್ದಾರೆ.

https://www.youtube.com/watch?v=SdYxqizsDEE

Comments

Leave a Reply

Your email address will not be published. Required fields are marked *