ಕುಮಾರಸ್ವಾಮಿ ರೆಸಾರ್ಟ್ ಸಿಎಂ: ಎನ್.ರವಿಕುಮಾರ್

ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 24 ಗಂಟೆಗಳ ಕಾಲ ರೆಸಾರ್ಟಿನಲ್ಲೇ ಇರುತ್ತಾರೆ. ಹೀಗಾಗಿ ಅವರು ರೆಸಾರ್ಟ್ ಸಿಎಂ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

ಚಿಂಚೋಳಿಯಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಎಲ್ಲಿಯೂ ನಮ್ಮ ಕೈಗೆ ಸಿಗುವುದಿಲ್ಲ. ಅವರು ಸಿಗುವುದು ಬೆಂಗಳೂರಿನ ತಾಜ್‍ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಮಾತ್ರ. ಅಲ್ಲಿಯೂ ಸಿಗದಿದ್ದರೆ ಯಾವುದಾದರು ರೆಸಾರ್ಟಿನಲ್ಲಿ ಸಿಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಜನ ಬಿಸಿಲಿನಲ್ಲಿ ಬಸವಳಿಯುತ್ತಿದ್ದರೆ ಸಿಎಂ ಎಸಿ ರೂಮ್‍ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುತ್ತಾರೆ. ನನಗೆ ಮತ ಹಾಕಿದ್ದೀರಾ ಎಂದು ಉತ್ತರ ಕರ್ನಾಟಕದ ಜನರನ್ನು ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಹೀಗೆ ಮಾತನಾಡುವುದು ಸರಿಯೇ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಕೇಳಿದರು.

Comments

Leave a Reply

Your email address will not be published. Required fields are marked *