ಹಕ್ಕಿ ಜ್ವರದ ಆತಂಕ- ಸೋಂಕು ಹೆಚ್ಚಾದ್ರೆ ಮೃಗಾಲಯ ಬಂದ್

ಮೈಸೂರು: ಮೈಸೂರು ಮೃಗಾಲಯಕ್ಕೆ ಮತ್ತೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ. 2017ರಲ್ಲಿ ಬಂದಿದ್ದ ಹಕ್ಕಿ ಜ್ವರದಿಂದ ಮೈಸೂರು ಮೃಗಾಲಯದಲ್ಲಿ ಸಾಲು ಸಾಲು ಪಕ್ಷಿಗಳು ಸತ್ತಿದ್ದ ಕಾರಣ ಮೃಗಾಲಯವನ್ನು ಒಂದು ತಿಂಗಳು ಮುಚ್ಚಲಾಗಿತ್ತು. ಈಗ ಮೈಸೂರಿನ ಕುಕ್ಕರಹಳ್ಳಿಕೆರೆಯಲ್ಲಿ ಎರಡು ಪೆಲಿಕಾನ್ ಸಾವಿನಿಂದ ಮತ್ತೆ ಹಕ್ಕಿ ಜ್ವರ ಅಪ್ಪಳಿಸುವ ಆತಂಕ ಸೃಷ್ಟಿಯಾಗಿದೆ.

ಅಕ್ಟೋಬರ್ 25 ಹಾಗೂ ಅಕ್ಟೋಬರ್ 28ರಂದು ಎರಡು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದವು. 2017ರಲ್ಲೂ ಮೊದಲು ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್‍ಗಳ ಸಾವು ಸಂಭವಿಸಿತ್ತು. ನಂತರ ಮೃಗಾಲಯದಲ್ಲಿನ ಪಕ್ಷಿಗಳಿಗೆ ಹಕ್ಕಿ ಜ್ವರ ಬಂದಿತ್ತು. ಪರಿಣಾಮವಾಗಿ ಒಂದು ತಿಂಗಳು ಮೃಗಾಲಯದ ಬಾಗಿಲು ಬಂದ್ ಮಾಡಲಾಗಿತ್ತು.

ಇದೀಗ ಮತ್ತದೆ ಆತಂಕದಲ್ಲಿ ಮೈಸೂರು ಮೃಗಾಲಯವಿದೆ. ಈಗ ಹಕ್ಕಿಗಳ ವಲಸೆ ಸಮಯ. ದೇಶ ವಿದೇಶಗಳಿಂದ ಪಕ್ಷಿಗಳು ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ ಹಾಗೂ ಮೃಗಾಲಯಕ್ಕೆ ವಲಸೆ ಬರುತ್ತವೆ. ಈ ವಲಸೆಯಿಂದ ಮತ್ತೆ ಹಕ್ಕಿ ಜ್ವರ ಸೊಂಕು ತಗುಲುವ ಭೀತಿ ಶುರುವಾಗಿದೆ. ಮುನ್ನಚ್ಚರಿಕಾ ಕ್ರಮವಾಗಿ ಮೃಗಾಲಯದಲ್ಲಿ ಪಕ್ಷಿ ಪ್ರಾಣಿಗಳ ಮೇಲೆ ನಿಗಾ ಇಡಲಾಗಿದೆ.

Comments

Leave a Reply

Your email address will not be published. Required fields are marked *