ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್

ರಾಯಚೂರು: ಪತಿ ಹಾಗೂ ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮೈಸೂರು ಮೂಲದ ಮಹಿಳೆ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ.

ಮನೆಯಿಂದ ಹೊರಬರುವ ಮೊದಲು ತಾಯಿಗೆ ವಿಡಿಯೋ ಕಾಲ್ ಮಾಡಿ ಗಂಡ ಮಂಜುನಾಥ್‍ನ ಕಿರುಕುಳದ ಬಗ್ಗೆ ಹೇಳಿದ್ದ ನಿಖಿತಾ, ರಾಯಚೂರಿನಲ್ಲಿ ಆಶ್ರಮ ಸೇರಲು ಬಂದಿದ್ದರು. ಒಂದು ಕಡೆ ಗಂಡ ಹಾಗೂ ಆತನ ಮನೆಯವರಿಂದ ಚಿತ್ರ ಹಿಂಸೆ, ಇನ್ನೊಂದೆಡೆ ಹೆತ್ತ ತಂದೆಯಿಂದಲೇ ಲೈಂಗಿಕ ಕಿರುಕುಳ ಯತ್ನ ನಡೆಯುತ್ತಿದ್ದರಿಂದ ಬೇಸತ್ತು ಹೊರ ಬಂದಿರುವುದಾಗಿ ನಿಖಿತಾ ಹೇಳಿದ್ದಾರೆ.

ಇದನ್ನೂ ಓದಿ: `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

ಸಾಯುವ ನಿರ್ಧಾರದೊಂದಿಗೆ ಮಗುವಿನೊಂದಿಗೆ ಮನೆಯಿಂದ ಹೊರಬಂದ ನಿಖಿತಾ, ರಾಯಚೂರಿನ ಫೇಸ್‍ಬುಕ್ ಸ್ನೇಹಿತ ಶಶಿಕಾಂತ್ ಸಹಾಯದಿಂದ ಆಶ್ರಮ ಸೇರಲು ಮುಂದಾಗಿದ್ದಾರೆ. ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ಹಾಗೂ ಪದೇ ಪದೇ ಅನುಮಾನಿಸುತ್ತಿದ್ದ ಗಂಡ ಕುಡಿದು ಬಂದು ಸಿಗರೇಟ್ ನಿಂದ ಮೈಯಲ್ಲಾ ಸುಡುತ್ತಿದ್ದರು. ಊಟದಲ್ಲಿ ಫಿನಾಯಿಲ್ ಹಾಕಿ ತಿನ್ನಲು ಒತ್ತಾಯಿಸುತ್ತಿದ್ದರು ಅಂತ ನಿಖಿತಾ ಆರೋಪಿಸಿದ್ದಾರೆ.

ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನಿಖಿತಾರನ್ನ ಹುಡುಕುತ್ತಿದ್ದು, ಇದೀಗ ರಾಯಚೂರಿನಲ್ಲಿ ಬೀಡುಬಿಟ್ಟಿದ್ದಾರೆ. ಒಂದು ವೇಳೆ ಪೊಲೀಸರು ಮರಳಿ ಕರೆದೊಯ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಖಿತಾ ಹೇಳಿದ್ದಾರೆ.

https://www.youtube.com/watch?v=-CQL0kx4Nlc

Comments

Leave a Reply

Your email address will not be published. Required fields are marked *