ಸೀಲ್‍ಡೌನ್ ಮುಕ್ತ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ

ಮೈಸೂರು: 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಗ್ರಾಮಗಳನ್ನು ಇವತ್ತು ಸೀಲ್‍ಡೌನ್ ನಿಂದ ಮುಕ್ತ ಮಾಡಲಾಯಿತು.

ವರುಣಾ ಕ್ಷೇತ್ರದ ಸೋಮೇಶ್ವರಪುರ ಹಾಗೂ ಹೆಬ್ಯಾ ಗ್ರಾಮಗಳು ಸೀಲ್‍ಡೌನ್ ಮುಕ್ತವಾಗಿ ಇಂದಿನಿಂದ ಸಹಜ ಸ್ಥಿತಿಗೆ ಮರಳಿದವು. ಸೀಲ್‍ಡೌನ್ ಆಗಿದ್ದ ಗ್ರಾಮದ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ ಸೋಮೇಶ್ವರಪುರ ಗ್ರಾಮದಲ್ಲಿ ನಡೆಯಿತು. ಸಿಎಂ ಪುತ್ರ ವಿಜಯೇಂದ್ರ ಸೂಚನೆಯಂತೆ ಗ್ರಾಮದ ಜನರು ಹಾಗೂ ಗ್ರಾಮದಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

ಸೀಲ್‍ಡೌನ್ ಆಗಿದ್ದ ವರುಣಾ ಕ್ಷೇತ್ರದ 5 ಗ್ರಾಮಗಳಲ್ಲಿಯೂ ಇದೆ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸನ್ಮಾನದ ಜೊತೆ ಪಡಿತರ ಕಿಟ್ ವಿತರಣೆಯೂ ನಡೆಯಿತು. ಬಿಜೆಪಿ ರಾಜ್ಯಕಾರ್ಯದರ್ಶಿ ಎಂ.ರಾಜೇಂದ್ರ, ಬಿಜೆಪಿ ಮುಖಂಡ ಅಶೋಕ್ ಹಾಗೂ ವಿಜಯೇಂದ್ರ ಅಭಿಮಾನಿಗಳು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *