ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನು ಮಾರಿಕೊಂಡಿಲ್ಲ: ಸಾರಾ ಮಹೇಶ್

ಮೈಸೂರು: ಯಾರ ಮೇಲೆ ಆರೋಪ ಇತ್ತು ಅವರು ನಾನಲ್ಲ ಎಂದು ಹೇಳೋಕೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ವ್ಯವಸ್ಥೆಯಲ್ಲಿ ಜನರಿಗೆ ನನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಿರುವುದು ಸತ್ಯ. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನ ಮಾರಿಕೊಂಡಿಲ್ಲ ಎಂದು ವಿಶ್ವನಾಥ್ ಮೇಲೆ ಕಿಡಿಕಾರಿದ್ದಾರೆ. ಇದನ್ನು ಓದಿ: ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

ನೀವು ಮಾರಿಕೊಂಡು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮನಸಾಕ್ಷಿ ಆತ್ಮಗೌರವ ಇದಿಯಾ ನಿಮಗೆ? ಇಷ್ಟು ಅನ್ಯಾಯ ಮಾಡಿ ಮಾತನಾಡುತ್ತಿದ್ದೀರಲ್ಲಾ ಏನು ಅನ್ನಿಸಲ್ವಾ. ನನ್ನನ್ನು ಕರೆದುಕೊಂಡು ಹೋಗಿ ಯಾರ ಹತ್ತಿರ ಮಾತನಾಡಿಸಿದ್ರಿ? ನೀವು ಬಾಂಬೆಯಿಂದ ಕರೆಸಿ ಯಾರನ್ನು ಮಾತನಾಡಿಸಿದ್ರಿ ಗೊತ್ತಿಲ್ವಾ. ನಿಮ್ಮ ಮನೆ ದೇವರ ಬಳಿಗೆ ಕರೆಯಿರಿ, ನೀವು ಏನ್ ಏನ್ ಮಾತನಾಡಿದ್ದೀರಿ ಎಂದು ಎಲ್ಲವನ್ನೂ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *