ರಾಷ್ಟ್ರೀಯ ಹೆದ್ದಾರಿಗಳ ಬದುಗಳಲ್ಲಿ ರಾಶಿ ರಾಶಿ ಕಸ – ನಿವಾಸಿಗಳಿಗೆ ರೋಗ ಭೀತಿ

ಮೈಸೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯಗಳ ರಾಶಿ ದಿನದಿನಕ್ಕೂ ಹೆಚ್ಚುತ್ತಿದ್ದು ತ್ಯಾಜ್ಯ ಕೊಳೆತು ನಾರುತ್ತಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಂಡವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬದುಗಳೇ ಕಸ ಹಾಕುವ ಸ್ಥಳವಾಗಿದೆ.

ಹೆದ್ದಾರಿಯ ಬದುವಿನಲ್ಲೆ ರಾಶಿ ರಾಶಿ ಕಸ ಸುರಿದಿರುವ ಕಾರಣ ಜನರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ. ಕಾರ್ಖಾನೆಗಳ ಕಸ ಹಾಗೂ ಕೋಳಿ ಫಾರಂನ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ರೋಗಗಳ ಭೀತಿ ಎದುರಾಗಿದೆ.

ಗ್ರಾಮ ಪಂಚಾಯತಿ ಅಧಿಕಾರಿಗಳು, ಸದಸ್ಯರು ಈ ಕಸ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮೂಖ ಪ್ರೇಕ್ಷಕರಂತೆ ಕೂತು ಬಿಟ್ಟಿದ್ದಾರೆ. ಹೀಗಾಗಿ ಸ್ವಚ್ಛತೆ ಕಡೆಗಣಿಸಿದ ಅಧಿಕಾರಿಗಳ, ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ರೈತ ಮುಖಂಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *