ಶ್ವೇತವರ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಲಿದ್ದಾರೆ ತಾಯಿ ಚಾಮುಂಡೇಶ್ವರಿ

ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಮುಂಡೇಶ್ವರಿ ದರ್ಶನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಾಡದೇವತೆಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ಹೌದು. ನರೇಂದ್ರ ಮೋದಿಯವರು ಚಾಮುಂಡೇಶ್ವರಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಿಯ ವಿಶೇಷ ಅಲಂಕಾರಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಇಂದು ಶ್ವೇತ ಬಣ್ಣದ ರೇಷ್ಮೆ ಸೀರೆಯಲ್ಲಿ ನಾಡದೇವತೆ ಕಂಗೊಳಿಸಲಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ

ಕೆಂಪು ಮತ್ತು ಗೋಲ್ಡನ್ ಕಲರ್ ಬಾರ್ಡರ್ ಒಳಗೊಂಡ ಬಿಳಿ ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡಿಗೆ ಅಲಂಕರಿಸುತ್ತಿದ್ದಾರೆ. ಸಂಜೆಯ ಅಲಂಕಾರಕ್ಕಾಗಿ ದೇಗುಲದ ಕಚೇರಿಯಲ್ಲಿ ಅಧಿಕಾರಿಗಳು ಈಗಾಗಲೇ ಸೀರೆ ತಂದಿಟ್ಟುಕೊಂಡಿದ್ದಾರೆ. ಸೀರೆ ಜೊತೆಗೆ ಕಮಲದ ಹೂವಿನ ಹಾರವೂ ಸಿದ್ಧವಾಗಿದೆ. ಮೋದಿ ಬರುವ ಮುನ್ನ ಅರ್ಚಕರು ಅಲಂಕಾರಗೊಳಿಸಲಿದ್ದಾರೆ.

Live Tv

Comments

Leave a Reply

Your email address will not be published. Required fields are marked *