ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ತಾಕತ್ತಿದೆ- ಮಾವುತ ವಿನು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 9ನೇ ಬಾರಿ ಅಂಬಾರಿ ಹೊರಲು ಅರ್ಜುನ ಸಿದ್ಧನಾಗಿದ್ದಾನೆ. ಅಂಬಾರಿ ಹೊರೋಕೆ ಅರ್ಜುನ ಹೇಗೆ ಸಿದ್ಧವಾಗಿದ್ದಾನೆ ಎಂಬುದರ ಬಗ್ಗೆ ಮಾವುತ ವಿನು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

ಅರ್ಜುನ ಈ ಬಾರಿ ಲಾಸ್ಟ್ ಅಂಬಾರಿ ಹೋರೋದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ಶಕ್ತಿ ಇದೆ. ಅರ್ಜುನ ಸ್ವಲ್ಪ ತುಂಟ. ಆದರೆ ಇಲ್ಲಿಗೆ ಬಂದರೆ ತಾಯಿ ಆಶೀರ್ವಾದದಿಂದ ಆ ತುಂಟತನ ಇರಲ್ಲ ಎಂದು ಹೇಳಿದ್ದಾರೆ.

ಅರ್ಜುನ ಗಾಂಭೀರ್ಯದಿಂದ ಅಂಬಾರಿ ಹೊರುತ್ತಾನೆ. ಆತ ಈ ಬಾರಿಯೂ ಅರಾಮವಾಗಿ ಅಂಬಾರಿ ಹೊರುತ್ತಾನೆ. ಅರ್ಜುನನ ಜೊತೆ ನಾನು ಕನ್ನಡದಲ್ಲಿ ಮಾತಾಡುವುದಾಗಿ ವಿನು ತಿಳಿಸಿದ್ದಾರೆ.

ಅಂಬಾರಿ ಹೊರುವ ಅರ್ಜುನನಿಗೆ ಗಂಡುಭೇರುಂಡಾ, ಶಂಕ ಚಕ್ರ, ವಿವಿಧ ಚಿತ್ತಾರಗಳ ಕಲಾಕೃತಿ ಅರ್ಜುನನಿಗೆ ಬಿಡಿಸಲಾಗುತ್ತಿದೆ. ಒಟ್ಟಿನಲ್ಲಿ ಬಣ್ಣ ಬಣ್ಣದ ಚಿತ್ತಾರದಲ್ಲಿ ಅಂಬಾರಿ ಹೊರಲು ಅರ್ಜುನ ರೆಡಿಯಾಗಿದ್ದಾನೆ.

ಜಂಬೂ ಸವಾರಿ ವೀಕ್ಷಿಸಲು ಈಗಾಗಲೇ ಅಂಬಾವಿಲಾಸ ಅರಮನೆ ಮುಂಭಾಗ 26 ಸಾವಿರ ಜನರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ರಸ್ತೆಯ ಬದಿಲ್ಲೂ ಸಹ ಆಸನಗಳ ವ್ಯವಸ್ಥೆ ಇದೆ. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಭಾರೀ ಜನಸ್ತೋಮ ಅರಮನೆ ನಗರಿಯಲ್ಲಿದೆ.

ಜಂಬೂ ಸವಾರಿಗೆ ಸಿದ್ಧತೆ ಆರಂಭವಾಗುವುದು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮಧ್ಯಾಹ್ನ 2.25ರಿಂದ 3 ಗಂಟೆಯ ನಡುವೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಮೆರವಣಿಗೆ ಆರಂಭವಾಗುತ್ತದೆ. ಸಂಜೆ 4.30ರಿಂದ 5 ಗಂಟೆ ನಡುವೆ ಕುಂಭ ಲಗ್ನದಲ್ಲಿ ಅಂಬಾರಿಗೆ ಸಿಎಂ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ 7 ಗಂಟೆಗೆ ಅಂಬಾರಿ ಬನ್ನಿ ಮಂಟಪ ತಲುಪತ್ತದೆ. ರಾತ್ರಿ 7.30ಕ್ಕೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಆರಂಭವಾಗುತ್ತದೆ. ಇದಕ್ಕೆ ರಾಜ್ಯಪಾಲ ವಜೂಭಾಯ್ ವಾಲಾ ಚಾಲನೆ ನೀಡಲಿದ್ದಾರೆ. ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸಿ ದಸರಕ್ಕೆ ಅಧಿಕೃತ ತೆರೆಬೀಳುತ್ತದೆ.

https://www.youtube.com/watch?v=ZnmJAbUqvg0

 

Comments

Leave a Reply

Your email address will not be published. Required fields are marked *