ನನ್ನ ಗಂಡ ಮಿಸ್ಸಿಂಗ್, ಪ್ಲೀಸ್ ಹುಡುಕಿಕೊಡಿ ಎಂದು ಗರ್ಭಿಣಿಯಿಂದ ದೂರು ದಾಖಲು

ಮಂಡ್ಯ: ತನ್ನ ಪತಿಯನ್ನು ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆ.ಆರ್.ಸಾಗರ ನಿವಾಸಿ ಸವಿತಾ ಎಂಬವರೇ ಗಂಡ ರಾಘವೇಂದ್ರರ ಹುಡುಕಾಟದಲ್ಲಿದ್ದಾರೆ. ನಗರದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಜುಲೈ 6ರಿಂದ ನಾಪತ್ತೆಯಾಗಿದ್ದಾನೆ. ಕೆಲಸವಿದೆ ಎಂದು ಮನೆಯಲ್ಲಿ ಗರ್ಭಿಣಿಯನ್ನು ಬಿಟ್ಟು ಹೋದ ರಾಘವೇಂದ್ರ ಇದೂವರೆಗೂ ಹಿಂದುರುಗಿ ಬಂದಿಲ್ಲ.

ಇದನ್ನೂ ಓದಿ: ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

ಮನೆಯಿಂದ ಹೋದ ಬಳಿಕ ರಾಘವೇಂದ್ರರ ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ. ಎಂಟು ವರ್ಷಗಳ ಹಿಂದೆ ರಾಘವೇಂದ್ರ ಮತ್ತು ಸವಿತಾ ಪ್ರೀತಿಸಿ ಮದುವೆಯಾಗಿದ್ರು. ನಂತ್ರ ಕೆ.ಆರ್.ಸಾಗರದಲ್ಲಿ ವಾಸವಾಗಿದ್ದಾರೆ. ಇತ್ತ ರಾಘವೇಂದ್ರ ಹೋಗುವಾಗ ತನಗೆ ಸಂಬಂಧಪಟ್ಟ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಿದ್ದಾನೆ. ಇದ್ರಿಂದಾಗಿ ಆತಂಕಗೊಂಡಿರುವ ಪತ್ನಿ ಸವಿತಾ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗಂಡನನ್ನು ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

 

 

 

Comments

Leave a Reply

Your email address will not be published. Required fields are marked *