ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಸ್ಲಿಂ ಯುವಕನಿಂದ ದೇವಾಲಯದಲ್ಲಿ ದೀರ್ಘ ದಂಡ ನಮಸ್ಕಾರ

ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ್ ಗೆಲುವಿಗಾಗಿ ಮುಸ್ಲಿಂ ಯುವಕನೋರ್ವ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

ಪಟ್ಟಣದ ರಾಜಾಬಕ್ಷಿ ಬಿಲ್ಲು ಖಾನ್ ಎಂಬವರು ವೀರಭದ್ರೇಶ್ವರ ದೇವಸ್ಥಾನದಿಂದ ದಾವಲ್ ಮಲ್ಲಿಕ್ ದರ್ಗಾದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂತಾ ರಾಜಾಭಕ್ಷಿ ಹರಕೆಯನ್ನು ಹೊತ್ತಿದ್ದಾರೆ.

ಜಿ.ಎಸ್.ಪಾಟೀಲ್ ಈ ಬಾರಿಯೂ ರೋಣದಿಂದ ಚುನಾಯಿತರಾಗಬೇಕು. ಜೊತೆಗೆ ಸಚಿವ ಸಂಪುಟದಲ್ಲಿ ಮಹತ್ವದ ಸಚಿವ ಖಾತೆ ಪಡೆಯಬೇಕು ಎಂದು ಹಿಂದು ಹಾಗೂ ಮುಸ್ಲಿಂ ದೇವರಲ್ಲಿ ರಾಜಾಬಕ್ಷಿ ಹರಕೆ ಹೊತ್ತಿದ್ದಾರೆ.

ಸುಮಾರು ಒಂದೂವರೆ ಕಿಲೋಮಿಟರ್ ದೂರದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಮೆಚ್ಚುಗೆಗೆ ರಾಜಾಭಕ್ಷಿ ಪಾತ್ರರಾಗಿದ್ದಾರೆ. ಈ ದೀರ್ಘ ದಂಡ ನಮಸ್ಕಾರ ವೇಳೆ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *