ಚಿತ್ರದುರ್ಗದ ಜೆಡಿಎಸ್ ನಗರಸಭೆ ಸದಸ್ಯ ಗಡಿಪಾರು

ಚಿತ್ರದುರ್ಗ: ವಿವಿಧ ಕೇಸ್‍ಗಳಲ್ಲಿ ಭಾಗಿಯಾಗಿದ್ದ ಚಿತ್ರದುರ್ಗದ ಜೆಡಿಎಸ್ ನಗರಸಭೆ ಸದಸ್ಯ ಚಂದ್ರಶೇಖರ ಅಲಿಯಾಸ್ ಖೋಟಾನೋಟು ಚಂದ್ರನನ್ನು ಗಡಿಪಾರು ಮಾಡಲಾಗಿದೆ.

ಚಿತ್ರದುರ್ಗದ ವಾರ್ಡ್ ಸಂಖ್ಯೆ 4ರ ಜೆಡಿಎಸ್ ಸದಸ್ಯನಾಗಿರುವ ಚಂದ್ರ ಖೋಟಾ ನೋಟು ಪ್ರಕರಣ ಸೇರಿದಂತೆ ಹಣ ದ್ವಿಗುಣಗೊಳಿಸುವ ಪ್ರಕರಣ ಹಾಗೂ ವಿವಿಧ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೆ ನಗರದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣನಾಗಿದ್ದನು.

ಹೀಗಾಗಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಗಡಿಪಾರು ಮಾಡಲಾಗಿದೆ. ಮಾರ್ಚ್ 21 ರಿಂದ ಮೇ 21ರವರೆಗೆ 2 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರುಗೊಳಿಸಲಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಈ ಆದೇಶ ಹೊರಡಿಸಿದ್ದಾರೆ.

Comments

Leave a Reply

Your email address will not be published. Required fields are marked *