ಶಾಸಕನಾಗಲು ಹೀಗೆ ಮಾಡ್ತಿದ್ದೀಯಾ?- ಪಾಟೀಲ್ ಪುತ್ರನಿಗೆ ಕೈ ಶಾಸಕಿ ಅವಾಜ್

ಮುಂಬೈ: ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿರೋ ಮುಂಬೈನ ಸೈಂಟ್ ಜಾರ್ಜ್ ಆಸ್ಪತ್ರೆ ಬಳಿ ಭಾರೀ ಹೈಡ್ರಾಮಾ ನಡೆದಿದೆ.

ಶ್ರೀಮಂತ್ ಪಾಟೀಲ್ ಭೇಟಿಯಾಗಲು ಮುಂಬೈನ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಆಗಮಿಸಿದರು. ಆದರೆ ಶಾಸಕಿಗೆ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಅವಕಾಶವೇ ಸಿಗಲಿಲ್ಲ.

ಬಾಗಿಲಲ್ಲೇ ನಿಂತಿದ್ದ ಶ್ರೀಮಂತ್ ಪಾಟೀಲ್ ಪುತ್ರ ಶ್ರೀನಿವಾಸ್, ಶಾಸಕಿಯನ್ನು ತಡೆದರು. ಈ ವೇಳೆ ಶ್ರೀನಿವಾಸ್ ಹಾಗೂ ಶಾಸಕಿ ಯಶೋಮತಿ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಎಂಎಲ್‍ಎ ಆಗಲು ಇದನ್ನೆಲ್ಲಾ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ ಶಾಸಕಿ, ಬಿಡು ನಿಮ್ಮಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಯಶೋಮತಿ ಗಲಾಟೆ ಮಾಡಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಶಾಸಕಿ ಯಶೋಮತಿಯನ್ನು ಆಸ್ಪತ್ರೆ ಒಳ ಹೋಗದಂತೆ ತಡೆದರು.

Comments

Leave a Reply

Your email address will not be published. Required fields are marked *