ಮುಂಬೈನ ರೌಡಿ ನೀಡಿದ್ದ ರವಿ ಪೂಜಾರಿಯ ಸುಳಿವು!

ಬೆಂಗಳೂರು: ಮೋಸ್ಸ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಳೆದ 15 ವರ್ಷಗಳಿಂದ ವಿವಿಧ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯ ಸುಳಿವಳನ್ನು ಮುಂಬೈ ರೌಡಿ ನೀಡಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಭೂಗತ ಪಾತಕಿ ರವಿ ಪೂಜಾರಿ ಬಗ್ಗೆ ಸುಳಿವು ನೀಡಿದ್ದು ಮುಂಬೈನ ರೌಡಿ ಆಕಾಶ್ ಶೆಟ್ಟಿ. ವಾರದ ಹಿಂದೆ ಸಿನಿಮೀಯ ರೀತಿಯಲ್ಲಿ ಮುಂಬೈ ಪೊಲೀಸರಿಂದ ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ರೌಡಿ ಆಕಾಶ್ ಶೆಟ್ಟಿ, ರವಿಪೂಜಾರಿ ಬಗ್ಗೆ ಬಾಯಿಬಿಟ್ಟಿದ್ದನು.

ಮುಂಬೈನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾಗ ಆಕಾಶ್ ಶೆಟ್ಟಿಗೆ ರವಿ ಪೂಜಾರಿ ಜೊತೆ ನಂಟಿತ್ತು. 3 ವರ್ಷಗಳ ಹಿಂದೆಯಷ್ಟೇ ಆಕಾಶ್ ಮುಂಬೈ ಬಿಟ್ಟು ಉಡುಪಿಗೆ ಮರಳಿದ್ದ. ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ವೀರಕಂಬ ಎಂಬಲ್ಲಿ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಆಕಾಶ್‍ನನ್ನು ಪೊಲೀಸರು ಬಂಧಿಸಿ ಮುಂಬೈನ ವಿಶೇಷ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಈ ವೇಳೆ ಆಕಾಶ್ ಬಾಯಿ ಬಿಡಿಸಿದ್ದ ಪೊಲೀಸರಿಗೆ ರವಿ ಪೂಜಾರಿ ಬಗ್ಗೆ ಸುಳಿವು ಸಿಕ್ಕಿತ್ತು ಎನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಬಿಲ್ಡರ್‍ಗಳಿಗೆ ಫೋನ್ ಮೂಲಕ ಧಮ್ಕಿ ಹಾಕ್ತಿದ್ದ. 60ಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ಚೋಟಾ ರಾಜನ್ ಜೊತೆ ಸೇರಿಕೊಂಡು ಅಂಡರ್ ವರ್ಲ್ಡ್ ಡಾನ್ ಆಗಿ ದುಬೈ, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ತಲೆ ಮರೆಸಿಕೊಳ್ತಿದ್ದ. ಸದ್ಯ ಸೆನಗಲ್‍ನ ಸ್ಥಳೀಯ ಪೊಲೀಸರು ಭೂಗತ ಪಾತಕಿ ರವಿಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *