ಮುಖ್ಯಮಂತ್ರಿ ಆಗಬೇಕಾದರೆ ಜನಾದೇಶ ಬೇಕು: ಸಿದ್ದರಾಮಯ್ಯ ಟೀಂಗೆ ಎಂಟಿಬಿ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಬೇಕಾದರೂ ಮೊದಲು ಜನಾದೇಶ ಮುಖ್ಯ ಎಂದು ಸಿದ್ದರಾಮಯ್ಯ ಟೀಂಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮೋತ್ಸವದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ನಮ್ಮ ಸರ್ಕಾರದ ಸಾಧನೆ ತಿಳಿಸಲು ಜನೋತ್ಸವ ಮಾಡುತ್ತಿದ್ದೇವೆ. ಆದರೆ ಸಿದ್ದರಾಮಯ್ಯ ಅವರ ಟೀಂ ಸಿದ್ದರಾಮೋತ್ಸವ ಮಾಡುತ್ತಿದೆ. ಅವರು ಸಿದ್ದರಾಮೋತ್ಸವ ಮಾಡಲಿ, ನಾವು ಜನೋತ್ಸವ ಮಾಡುತ್ತೇವೆ. ಸಿದ್ದರಾಮೋತ್ಸವ ಮಾಡಿದರೆ ನಮಗೇನು ಅಭ್ಯಂತರ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಗೋಮಾಂಸ ಪ್ರಕರಣವನ್ನು ಪ್ರಸ್ತಾಪಿಸಿ ಸಿದ್ದುವನ್ನು ಸಿಂಹ ಎಂದು ಕೊಂಡಾಡಿದ ಜಮೀರ್

ಸಿದ್ದರಾಮಯ್ಯ ಸಿಎಂ ಎಂಬ ಅವರ ಶಿಷ್ಯರ ಹೇಳಿಕೆಗೆ ತಿರುಗೇಟು ಕೊಟ್ಟ ಎಂಟಿಬಿ, ಯಾರೇ ಮುಖ್ಯಮಂತ್ರಿ ಆಗಬೇಕಾದರೂ ಜನರ ತೀರ್ಮಾನ ಮುಖ್ಯ. ಸಿಎಂ ಆಗಬೇಕಾದರೆ ಜನಾದೇಶ ಮೊದಲು‌ ಅವಶ್ಯಕತೆ ಇದೆ. ಜನರು ತೀರ್ಮಾನ ಕೊಡದೇ ಸಿಎಂ ಆಗಲು ಸಾಧ್ಯವಿಲ್ಲ ಅಂತಾ ಸಿದ್ದರಾಮಯ್ಯ ಟೀಂಗೆ ಎಂಟಿಬಿ ನಾಗರಾಜ್ ಟಾಂಗ್‌ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *