ಸಿಎಂ ಎಸಿಬಿಯನ್ನ ಛೂಬಿಡುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಉಡುಪಿ: ದೇಶದಲ್ಲೇ ಮೊದಲಬಾರಿಗೆ ಐಟಿ ಅಧಿಕಾರಿಗಳ ಮೇಲೆ ಎಸಿಬಿ ಯನ್ನು ಛೂಬಿಡಲಾಗ್ತಿದೆ. ವಿನಾಶಕಾಲೇ ವಿಪರೀತ ಬುದ್ದಿ ಎಂಬಂತೆ ಸಿಎಂ ಸಿದ್ದರಾಮಯ್ಯ ವರ್ತನೆ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ಮಾಡುತ್ತದೆ ಎಂಬ ವಿಚಾರ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲವಿಲ್ಲ ರಾಜ್ಯದ ಐಟಿ ಅಧಿಕಾರಿಗಳು ಭಯ ಪಡಲ್ಲ. ಐಟಿ ಮೇಲೆ ಸಂಶಯ ಇದ್ದರೆ ಸಿಬಿಐ ಗೆ ದೂರು ನೀಡಲಿ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ ದಿಂದ ಪರಿಮಿತಿ ಮೀರಿ ಅಧಿಕಾರ ಪ್ರಯೋಗ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಭಂಡ ಸರ್ಕಾರ ಎಂದು ಸಾಬೀತಾಗಿದೆ. ನೋಟ್ ಬ್ಯಾನ್ ನಂತರ ಹಲವು ಕಡೆ ಐಟಿ ದಾಳಿಗಳು ನಡೆದಿದೆ. ಕರ್ನಾಟಕದಲ್ಲೂ ಸಹಜ ದಾಳಿಗಳು ನಡೆದಿವೆ. ಇದು ಕರ್ನಾಟಕ ರಾಜ್ಯಕ್ಕೆ ಅವಮಾನ ರಾಜ್ಯದಲ್ಲಿ ಅಧಿಕಾರಿಗಳ ದುರ್ಬಳಕೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *