ಮನೆಯಿಂದ ಹೊರಗೆ ಬಂದ್ರೆ ಕಾಗೆಗಳ ದಾಳಿ- ಮೂರು ವರ್ಷದಿಂದ ಕಾಡುತ್ತಿದೆ ಸಮಸ್ಯೆ

ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸುಮೆಲಾ ಗ್ರಾಮದ ಶಿವ ಕೇವಟ್ ಎಂಬವರು ಕಾಗೆಗಳ ದಾಳಿಯಿಂದ ಬೇಸತ್ತಿದ್ದಾರೆ. ಶಿವ ಮನೆಯಿಂದ ಹೊರಗೆ ಬಂದರೆ ಸಾಕು ಕಾಗೆಗಳು ದಾಳಿ ನಡೆಸುತ್ತವೆ. ಕೆಲವೊಮ್ಮೆ ಗುಂಪಾಗಿ ಬಂದು ಶಿವ ಮೇಲೆ ಕಾಗೆಗಳು ದಾಳಿ ನಡೆಸಿ ಗಾಯಗೊಳಿಸುತ್ತವೆ.

ಕಳೆದ ಮೂರು ವರ್ಷಗಳಿಂದ ಕಾಗೆಗಳು ಈ ರೀತಿ ಶಿವ ಮೇಲೆ ದಾಳಿ ನಡೆಸುತ್ತಿವೆ. ಕಾಗೆಗಳು ತಮ್ಮ ಬಲವಾದ ರೆಕ್ಕೆ ಮತ್ತು ಕೊಕ್ಕಿನಿಂದ ಕುಕ್ಕಿ ಗಾಯಗೊಳಿಸುತ್ತಿವೆ. ಹೀಗಾಗಿ ಶಿವ ಮನೆಯಿಂದ ಹೊರ ಬಂದ್ರೆ ತಲೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬರುತ್ತಾರೆ. ಕಾಗೆಗಳು ಇಷ್ಟೆಲ್ಲ ದಾಳಿ ನಡೆಸಿದ್ರೂ ಶಿವ ಪಕ್ಷಿಗೆ ಯಾವುದೇ ಹಾನಿಯುಂಟು ಮಾಡಿಲ್ಲ. ಕೇವಲ ಕೋಲು ತೋರಿಸಿ ಬೆದರಿಸುತ್ತಾರೆ. ಕಾಗೆಗಳು ಶಿವ ಮನೆಯಿಂದ ಹೊರ ಬರೋದನ್ನು ಕಾಯುತ್ತಿರುತ್ತಿವೆ.

ಮೂರ ವರ್ಷದ ಕಥೆ: ಮೂರು ವರ್ಷಗಳ ಹಿಂದೆ ಶಿವ ಬಲೆ ಯಲ್ಲಿ ಸಿಲುಕಿದ್ದ ಕಾಗೆ ಮರಿಯ ರಕ್ಷಣೆಗೆ ಮುಂದಾಗಿದ್ದರು. ಗಾಯಗೊಂಡಿದ್ದ ಕಾಗೆ ಮರಿ ಶಿವ ಕೈಯಲ್ಲಿಯೇ ಪ್ರಾಣ ಬಿಟ್ಟಿತ್ತು. ನಾನು ಕಾಗೆಗಳಿಗೆ ನಾನು ನಿಮ್ಮ ಕಂದನನ್ನ ಸಾಯಿಸಿಲ್ಲ. ಬದಲಾಗಿ ರಕ್ಷಣೆ ಮಾಡಲು ಹೋಗಿದ್ದೆ ಎಂದು ಹೇಗೆ ಅರ್ಥ ಮಾಡಿಸಲಿ ಎಂದು ಶಿವ ಬೇಸರ ವ್ಯಕ್ತಪಡಿಸುತ್ತಾರೆ.

ಶಿವನ ಮೇಲೆ ಕಾಗೆಗಳು ದಾಳಿ ನಡೆಸೋದು ಗ್ರಾಮಸ್ಥರಿಗೆ ಒಂದು ರೀತಿಯ ಮನರಂಜನೆ ಆಗಿದೆ. ಕಾಗೆಗಳು ದೀರ್ಘವಧಿ ಜ್ಞಾಪಕ ಶಕ್ತಿಯನ್ನು ಹೊಂದಿದ್ದು, ತಮ್ಮ ಶತ್ರುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

Comments

Leave a Reply

Your email address will not be published. Required fields are marked *