ತಂದೆಯವರು ಚುನಾವಣಾ ರಾಜಕೀಯ ನಿಲ್ಲಿಸಬಹುದು, ಆದ್ರೆ ಸಕ್ರಿಯ ರಾಜಕಾರಣದಲ್ಲಿರ್ತಾರೆ: ಬಿ.ವೈ ರಾಘವೇಂದ್ರ

ನವದೆಹಲಿ: ತಂದೆಯವರು ಚುನಾವಣಾ ರಾಜಕೀಯ ನಿಲ್ಲಿಸಬಹುದು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ಇರುತ್ತಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರ ಅವರು ಉಪಾಧ್ಯಕ್ಷರಾಗಿ ರಾಜ್ಯದ್ಯಾಂತ ಪ್ರವಾಸ ಮಾಡುತ್ತಿದ್ದಾರೆ. ಪ್ರವಾಸದ ವೇಳೆ ಅವರ ಸ್ಪರ್ಧೆ ಬಗ್ಗೆ ಗೊಂದಲಗಳು ಕೇಳಿ ಬರುತ್ತಿದ್ದವು. ಹೀಗಾಗಿ ತಂದೆಯವರು ಘೋಷಣೆ ಮಾಡಿದ್ದಾರೆ. ಶಿಕಾರಿಪುರ ಜನರು ನಾವು ಕುಟುಂಬದ ರೀತಿಯಲ್ಲಿದ್ದೇವೆ ಎಂದರು.

ಕ್ಷೇತ್ರದ ಮುಖಂಡರು ನೀವೂ ಸ್ಪರ್ಧೆ ಮಾಡಬೇಕು ಇಲ್ಲ ವಿಜಯೇಂದ್ರ ಮಾಡಬೇಕು ಅಂತಾ ಮನವಿ ಮಾಡಿದರು. ಈಗ ವಿಜಯೇಂದ್ರ ಹೆಸರು ಘೋಷಣೆ ಮಾಡಿದ್ದಾರೆ. ಪಕ್ಷ ಇದನ್ನು ಒಪ್ಪಿಕೊಳ್ಳುವ ಭರವಸೆ ಇದೆ. ನಾವು ಪಕ್ಷದ ಖುಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಜನಸಂಖ್ಯಾ ನಿಯಂತ್ರಣ ಮಸೂದೆ ಮಂಡಿಸುತ್ತೇನೆ: 4 ಮಕ್ಕಳ ತಂದೆ, BJP ಸಂಸದ ರವಿ ಕಿಶನ್‌ ಹೇಳಿಕೆ

ಶಿಕಾರಿಪುರದ ಜೊತೆಗೆ ವಿಜಯೇಂದ್ರ ಪಕ್ಷದ ಕೆಲಸ ಮಾಡಲಿದ್ದಾರೆ. ತಂದೆಯವರು ಚುನಾವಣಾ ರಾಜಕೀಯ ನಿಲ್ಲಿಸಬಹುದು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ಇರುತ್ತಾರೆ. ಕಾರ್ಯಕರ್ತರ ಅಭಿಪ್ರಾಯದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *