ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ- ಸಚಿವರ ಎದುರಲ್ಲೇ ಮೌಲ್ವಿ ಪ್ರಚೋದನಕಾರಿ ಹೇಳಿಕೆ!

ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟಿಲ್ ಎದುರಲ್ಲೇ ಮುಂದಿನ ತಿಂಗಳುಗಳಲ್ಲಿ ಬರುವ ಬಕ್ರೀದ್ ನಂದು ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ ನಡೆಯುತ್ತದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಂದು ನಡೆದ ರಂಜಾನ್ ಆಚರಣೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ ತನ್ವೀರ್ ಪೀರಾ ಎಂಬುವರು ಮುಂದಿನ ತಿಂಗಳುಗಳಲ್ಲಿ ಬಕ್ರೀದ್ ಬರುತ್ತದೆ ಆಗ ನಾವು ಗೋವುಗಳನ್ನು ಕೊಲ್ಲುತ್ತೇವೆ. ಅದನ್ನು ಸೈತಾನ್ ವಿರೋಧಿಸುತ್ತಾರೆ. ನಾವು ಇದಕ್ಕೆ ಸುಮ್ಮನೇ ಕೂರುಬಾರದು. ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್

ಈ ವೇಳೆ ಸಭೆಯಲ್ಲಿಯೇ ಇದ್ದ ಸಚಿವ ಶಿವಾನಂದ ಪಾಟೀಲ್‍ರು ಮೌಲ್ವಿಗಳ ವಿರುದ್ಧ ತುಟುಕ್ ಪಿಟಕ್ ಎನ್ನದೆ ಸುಮ್ಮನೇ ಕುಳಿತಿದ್ದರು.

Comments

Leave a Reply

Your email address will not be published. Required fields are marked *