ಸೀಮೆ ಎಣ್ಣೆ ಸುರಿದುಕೊಂಡು 11 ತಿಂಗಳ ಮಗುವಿನ ಜೊತೆ ತಾಯಿ ಆತ್ಮಹತ್ಯೆ!

ಕೊಪ್ಪಳ: ಸೀಮೆ ಎಣ್ಣೆ ಸುರಿದುಕೊಂಡು ತಾಯಿ ಹಾಗೂ 11 ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ.

ತೇಜಸ್ವೀನಿ(23) ಮತ್ತು ವರ್ಷಿಣಿ(11) ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು. ಪತಿ ಕಿರಣ್ ಮೊದಲ ಪತ್ನಿಯಿಂದ ದೂರವಾದ ಬಳಿಕ ತೇಜಸ್ವಿನಿ ಅವರನ್ನು 2 ವರ್ಷದ ಹಿಂದೆ ವಿವಾಹವಾಗಿದ್ದನು. ಮೊದಲ ಪತ್ನಿ ಕಿರಣ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಪತಿಯನ್ನು ತೊರೆದಿದ್ದರು ಎಂದು ಹೇಳಲಾಗುತ್ತಿದೆ.

ತೇಜಸ್ವೀನಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಮಹಿಳೆ ಪೋಷಕರು ಪತಿ ಕಿರಣ್ ವಿರುದ್ಧ ಕೊಲೆಯ ಆರೋಪ ಮಾಡುತ್ತಿದ್ದಾರೆ. ಸದ್ಯ ಕಿರಣ್ ನನ್ನು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಗಂಗಾವತಿ ಆಥಿsಠಿ ಸಂತೋಷ್ ಬನಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *