ಮಸೀದಿ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ಹಿಂದೂ ಮಹಿಳೆಗೆ ಥಳಿತ

– ಉಡುಪಿಯ ಜಾಮಿಯಾ ಮಸೀದಿ ಬಳಿ ಅಮಾನವೀಯ ಘಟನೆ

ಉಡುಪಿ: ನಗರದ ಮಸೀದಿ ಆವರಣದಲ್ಲಿ ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಹಿಂದೂ ಮಹಿಳೆಯನ್ನು ಥಳಿಸಿದ್ದಾರೆ.

ಉಡುಪಿಯ ಜಾಮಿಯಾ ಮಸೀದಿ ಆವರಣದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಮಹಿಳೆ ಮದ್ಯ ಸೇವಿಸಿ ಗೇಟ್ ಬಳಿ ಭಿಕ್ಷೆ ಬೇಡುತ್ತಿದ್ದಳು ಎಂಬುದು ಮಸೀದಿ ಮಂದಿಯ ಆರೋಪ. ಅಲ್ಲಾಹು ನನಗೆ ಒಳಿತನ್ನು ಮಾಡಬಹುದು ಎಂದು ನಂಬಿ ನಾನು ಮಸೀದಿಗೆ ಬೇಡಲು ಬಂದಿದ್ದೇನೆ. ನನ್ನನ್ನು ಬಿಟ್ಟುಬಿಡಿ ಇನ್ನು ಮುಂದೆ ಇಲ್ಲಿಗೆ ಬರುವುದಿಲ್ಲ, ದಯವಿಟ್ಟು ನನ್ನನ್ನು ಬಿಡಿ ಎಂದು ಕಾಲು ಹಿಡಿದು ಮಹಿಳೆ ಬೇಡಿಕೊಂಡಿದ್ದಾಳೆ. ಎಷ್ಟೇ ಪರಿಪರಿಯಾಗಿ ಬೇಡಿದರೂ ಮಸೀದಿಯ ಸಿಬ್ಬಂದಿ ಕುಡಿದು ಮಸೀದಿಯೊಳಗೆ ಯಾಕೆ ಬಂದೆ ಎಂದು ಉರ್ದುವಿನಲ್ಲಿ ಪ್ರಶ್ನಿಸಿ, ಬೈದಿದ್ದಾರೆ.

ಈ ಮೂಲಕ ಮಹಿಳೆಯೊಂದಿಗೆ ಮಸೀದಿ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈ ಕುರಿತು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಿಕ್ಷುಕರಲ್ಲಿ ಧರ್ಮ ನೋಡಬಾರದು, ಸಾಧ್ಯವಾದರೆ ಭಿಕ್ಷೆ ಕೊಡಿ. ಹೊಡೆಯುವ ಅಧಿಕಾರ ನಿಮಗಿಲ್ಲ. ಭಿಕ್ಷೆ ಕೊಡಲು ನಿಮ್ಮಲ್ಲಿ ಹಣ ಇಲ್ಲದಿದ್ದರೆ ಕೊಡಬೇಡಿ ಎಂಬೆಲ್ಲ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ ಸಾಮಾಜಿಕ ಹೋರಾಟಗಾರ ಅಹಮ್ಮದ್ ಅನ್ಸಾರ್ ಸೇರಿದಂತೆ, ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *