ಭೂ ಕುಸಿತದಿಂದ ಸೂರು ಕಳೆದುಕೊಂಡ 500ಕ್ಕೂ ಹೆಚ್ಚು ಕುಟುಂಬ

ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ ಗ್ರಾಮಗಳಲ್ಲಿ ನಡೆದಿರೋ ಭೂ ಕುಸಿತದಿಂದ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಸೂರು ಕಳೆದುಕೊಂಡಿದ್ದರೆ, ಒಂದಷ್ಟು ಕುಟುಂಬಗಳು ತಾವು ಉಳಿದಿದ್ದೇ ಹೆಚ್ಚು ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಉದ್ಘಾರಕ್ಕೆ ಕಾರಣವಾಗಿರುವುದು ಅಲ್ಲಿನ ಸದ್ಯದ ಭೀಕರ ಸ್ಥಿತಿ.

ಕೆಲವು ಭಾಗಗಳಲ್ಲಿ ಭೂಕುಸಿತ ಪ್ರಪಾತವನ್ನೇ ಸೃಷ್ಟಿಸಿದ್ದು, ಆಸುಪಾಸಲ್ಲಿದ್ದ ಮನೆ, ಪರಿಸರ ಗುರುತೇ ಸಿಗದಷ್ಟು ಬದಲಾಗಿದೆ. ಬೆಟ್ಟ ಒಡೆದು ಹೊರಬರುವ ನೀರು ಅಲ್ಲಲ್ಲಿ ಹೊಳೆಯೇ ಇರದಿದ್ದ ಜಾಗದಲ್ಲಿ ಹೊಳೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದ್ಕಡೆ ಅಲ್ಲಿನ ಹೆದ್ದಾರಿ ಸಂಪೂರ್ಣ ನಾಮಾವಶೇಷ ಆಗಿದೆ.

ರಸ್ತೆ ಹತ್ತು ಅಡಿ ಆಳಕ್ಕೆ ಕುಸಿದಿದ್ದು, ಸದ್ಯಕ್ಕೆ ರಸ್ತೆ ರಿಪೇರಿ ಸಾಧ್ಯವೇ ಇಲ್ಲ ಅನ್ನುವಂತಿದೆ. ಆದರೂ ಎಲ್ಲಿವರೆಗೆ ರಸ್ತೆಯ ಮಣ್ಣು ತೆರವು ಮಾಡಲಾಗುತ್ತೋ ಅಲ್ಲಿವರೆಗೆ ಮಾಡ್ತೀವಿ ಅನ್ನುತ್ತಲೇ ಜೆಸಿಬಿ ಕೆಲಸ ಮಾಡುತ್ತಿದೆ. ಇನ್ನು ಜೋಡುಪಾಲ ಜಂಕ್ಷನ್ ಬಳಿಯ ಗುಡ್ಡದಲ್ಲೇ ಸ್ಫೋಟ ಸಂಭವಿಸಿದ್ದು ಹತ್ತಾರು ಮನೆಗಳನ್ನು ಮಣ್ಣಿನಡಿಗೆ ಹಾಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *