ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿ!

ಬೆಂಗಳೂರು: ನಗರದ ಪ್ರಸಿದ್ಧ ದೇವಾಲಯವಾದ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿಯಾಗಿದೆ.

ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಒಂದೂವರೆ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂ. ಹುಂಡಿ ಹಣ ಸಂಗ್ರಹವಾಗಿದ್ದು ಇತಿಹಾಸ ಸೃಷ್ಟಿಯಾಗಿದೆ. ಇದರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ತುಂಬಾ ಖುಷಿಯಾಗಿದ್ದಾರೆ.

ಈ ಹಿಂದೇ ಒಂದೂವರೆ ತಿಂಗಳಲ್ಲಿ ಸಾಮಾನ್ಯವಾಗಿ 30 ಲಕ್ಷ ರೂ. ಆದಾಯ ಬರುತ್ತಿತ್ತು, ಆದರೆ ಈ ಬಾರಿ ಬನಶಂಕರಿ ಅಮ್ಮನಿಗೆ 50 ಲಕ್ಷ ರೂ. ಕಾಣಿಕೆ ಬಂದಿದೆ. ಇಂದು ಹುಂಡಿಯಲ್ಲಿದ್ದ ಹಣವನ್ನು ಹೊರ ತೆಗೆದು ಸುಮಾರು 30 ಕ್ಕೂ ಅಧಿಕ ಮಂದಿ ಕುಳಿತು ಲೆಕ್ಕ ಹಾಕಿದ್ದಾರೆ.

ಬನಶಂಕರಿ ದೇವಾಲಯದಲ್ಲಿ ಪ್ರತಿದಿನ ಸಂಜೆ ಭಕ್ತಾಧಿಗಳು ಬರುತ್ತಿರುತ್ತಾರೆ. ಆದರೆ ಶನಿವಾರ ಭಾನುವಾರ ಬಂದರೆ ಸಾಕು ಈ ದೇವಾಲಯದಲ್ಲಿ ಜನಸಾಗರವೇ ನೆರೆದಿರುತ್ತದೆ. ದೇವಾಲಯಕ್ಕೆ ಬಂದ ಭಕ್ತಾಧಿಗಳು ವರ ಬೇಡಿಕೊಂಡು ನಿಂಬೆ ಹಣ್ಣು ಮತ್ತು ಎಳ್ಳಿನ ದೀಪವನ್ನು ಹಚ್ಚಿ ಹೋಗುತ್ತಾರೆ. ಬೇಡಿಕೆ ಈಡೇರಿದ ಮೇಲೆ ಹರಕೆ ಹಣವನ್ನು ಹುಂಡಿಯಲ್ಲಿ ಹಾಕಿ ದೀಪವನ್ನು ಹಚ್ಚಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಾಲಯ ಬನಶಂಕರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇದೆ.

Comments

Leave a Reply

Your email address will not be published. Required fields are marked *