ಕಾರವಾರ: ಹಾವು ಅಂದರೆ ಎಲ್ಲರೂ ಭಯ ಪಡುತ್ತಾರೆ. ಅಂಥದ್ರಲ್ಲಿ ಕಾರ್ಕೋಟಕ ವಿಷವಿರುವ ಕಾಳಿಂಗ ಸರ್ಪವನ್ನು ನೋಡಿದರೆ ಯಾರಿಗೆ ತಾನೇ ಭಯ ಆಗಲ್ಲ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ 12 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗೋಬ್ರಾಳ ದಲ್ಲಿ ನಡೆದಿದೆ.
ಜಿಲ್ಲೆಯ ದಾವುಲ್ ಶೇಖ್ ಎಂಬವರ ರೆಸಾರ್ಟ್ ಗೆ ಈ ಅಪರೂಪದ ಅಥಿತಿ ಆಗಮಿಸಿದ್ದು, ತನ್ನ ಬೃಹದಾಕಾರದ ಮೈಮಾಟದಿಂದ ಸ್ಥಳೀಯರನ್ನು ಭಯಭೀತಗೊಳಿಸಿತ್ತು. ತಕ್ಷಣ ಇಲ್ಲಿನವರು ಉರುಗ ತಜ್ಞ ರಝಾಕ್ ಶಾಹಾಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರುಗ ತಜ್ಞ 12 ಅಡಿಗೂ ಹೆಚ್ಚು ಉದ್ದದ 10 ವರ್ಷ ಪ್ರಾಯದ ಹೆಣ್ಣು ಕಾಳಿಂಗವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಕಾಳಿಂಗಗಳು ಬಿಸಲಿನ ಬೇಗೆಗೆ ತಂಪು ಪ್ರದೇಶ ಅರಸಿ ಬರುವುದು ಸಾಮಾನ್ಯ. ಹೀಗಾಗಿ ಅಪರೂಪದ ಅಳವಿನಂಚಿನಲ್ಲಿರುವ ಈ ಕಾಳಿಂಗ ಗಳು ಮಾರ್ಚ್ ನಿಂದ ಜೂನ್ ವರಗೆ ತಂಪು ಪ್ರದೇಶ ಅರಸಿ ನಾಡಿಗೆ ಬರುತ್ತಿವೆ. ಇಲ್ಲಿ ಸುಲಭವಾಗಿ ತನ್ನ ಆಹಾರ ಅರಸಿ ಭೇಟೆಯಾಡುತ್ತವೆ. ಇದಲ್ಲದೇ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿಗೆ ತೊಡಗುತ್ತವೆ. ಇವುಗಳನ್ನು ಕೊಲ್ಲದೇ ರಕ್ಷಿಸಬೇಕು. ಸರಿಸುಮಾರು 20 ವರ್ಷ ಬದುಕುವ ಇವು ಗೂಡನ್ನು ಕಟ್ಟಿ 25 ರಿಂದ 30 ಮೊಟ್ಟೆ ಇಡುತ್ತವೆ. ಇವು ತನ್ನ ಮೊಟ್ಟೆ ಯನ್ನು ಕಾಯುವ ಏಕೈಕ ಹಾವಾಗಿದೆ. ಅಳವಿನಂಚಿನಲ್ಲಿ ಇರುವ ಈ ಹಾವನ್ನು ರಕ್ಷಿಸಬೇಕು ಎಂದು ಉರುಗ ತಜ್ಞ ರಝಾಕ್ ಶಾಹ ಹೇಳಿದ್ದಾರೆ.
https://www.youtube.com/watch?v=1HFy7Gai9XM

Leave a Reply