ಕರ್ನಾಟಕಕ್ಕೆ ಬಂತು ಮೋಡಿಫೈಯಿಂಗ್ ಆಂದೋಲನ

ಉಡುಪಿ: ಗುಜರಾತ್ ಸಿಎಂ ಮೋದಿಯನ್ನು ಪ್ರಧಾನಿ ಮಾಡಿದ ಮೋಡಿಫೈಯಿಂಗ್ ಸಂಸ್ಥೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಉಡುಪಿಯಲ್ಲಿ ಮೋಡಿಫೈಯಿಂಗ್ ಉದಯವಾಗಿದೆ. ಕಟಪಾಡಿಯ ಮಹೇಶ್ ಶೆಣೈ ಕರ್ನಾಟಕದ ಉಸ್ತುವಾರಿಯಾಗಿದ್ದಾರೆ.

ಉಡುಪಿಯಲ್ಲಿ ಮೈಸೂರು ಸಂಸದ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಈ ಸಂಸ್ಥೆಯ ಉದ್ಘಾಟನೆ ಮಾಡಿದ್ದಾರೆ. 7 ವರ್ಷದ ಹಿಂದೆ ದೆಹಲಿಯ ತೇಜೇಂದ್ರಪಾಲ್ ಸಿಂಗ್ ಭಾಗ್ ಅವರು ಮೋಡಿಫೈಯಿಂಗ್ ಆಂದೋಲನ ಶುರು ಮಾಡಿದ್ದರು. ಇದೀಗ ಆಂದೋಲನ ಕರ್ನಾಟಕಕ್ಕೆ ವಿಸ್ತರಿಸಿದೆ.

ಚಾಯ್ ಪೆ ಚರ್ಚಾ, ಚಹಾ ವಿತರಣೆ, ರನ್ ಫಾರ್ ಯೂನಿಟಿ ಮತ್ತಿತರ ಕಾರ್ಯಕ್ರಮ ವನ್ನು ತೇಜ್ ಪಾಲ್ ಮಾಡಿದ್ದರು. ಚುನಾವಣೆವರೆಗೂ ನಿರಂತರವಾಗಿ ಮೋಡಿಫೈಯಿಂಗ್ ಕ್ಯಾಂಪೇನ್ ಇರಲಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯ, ಮೋದಿ ಸರ್ಕಾರದ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ಕೆಲಸವನ್ನು ಮೋಡಿಫೈಯಿಂಗ್ ಮಾಡುತ್ತದೆ. ರಾಜಕೀಯ ರಹಿತವಾಗಿರುವ, ಮೋದಿ ಅಭಿಮಾನಿಗಳನ್ನು, ಕೇಂದ್ರ ಸರ್ಕಾರವನ್ನು ಒಪ್ಪುವ ಜನರನ್ನು ಒಗ್ಗೂಡಿಸುವುದು ಮೋಡಿಫೈಯಿಂಗ್ ಕೆಲಸ.

ದೇಶಕ್ಕೆ ಮೋದಿ ಸಮರ್ಥ ಪ್ರಧಾನಿಯಾಗಿದ್ದರೆ ರಾಜ್ಯಕ್ಕೊಬ್ಬ ಸಮರ್ಥ ಮುಖ್ಯಮಂತ್ರಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಮೋದಿ ಸಾಧನೆ ಜನಕ್ಕೆ ಮುಟ್ಟಿಸುವ ಗುರಿಯಿದೆ. ದಕ್ಷಿಣ ಭಾರತದಲ್ಲಿ ಮೋದಿ ಹವಾ ಕ್ರಿಯೇಟ್ ಮಾಡುವ ಅಭಿಲಾಷೆಯಿದೆ. ಕರ್ನಾಟಕಕ್ಕೂ ಬಿಜೆಪಿ ಆಡಳಿತ ಬೇಕು ಅಂತ ಕರ್ನಾಟಕ ಉಸ್ತುವಾರಿ, ಉಡುಪಿ ಸಂಚಾಲಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *