ಮಕ್ಕಳ ಕಿಡ್ನಾಪ್ ವದಂತಿ ಪ್ರಕರಣ – ಮೊತ್ತೊಬ್ಬ ಅಮಾಯಕ ಬಲಿ

ಬೆಂಗಳೂರು: ರಾಜ್ಯದೆಲ್ಲೆಡೆ ಮಕ್ಕಳ ಕಳ್ಳರ ವದಂತಿ ಹಬ್ಬಿದ್ದು, ಕಾಟನ್ ಪೇಟೆ ಪಕ್ಷ ಗಾರ್ಡನ್ ನಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲೆಮಾಡಿದ್ದ ಪ್ರಕರಣ ಮಾಸುವೇ ಮುನ್ನವೇ ಮತ್ತೊಂದು ಘಟನೆ ಸಂಭವಿಸಿದೆ.

ಕರ್ನಾಟಕ ಗಡಿಗೆ ಹೊಂದಿಕೊಂಡಿರೋ ತಮಿಳುನಾಡಿನ ಹೊಸೂರು ಸಮೀಪದ ವನ್ನಲವಾಡಿ ಗ್ರಾಮದಲ್ಲಿ ಮಕ್ಕಳ ಕಳ್ಳ ಎಂದು ಶಂಕಿಸಿ ಉತ್ತರಭಾರತಿಯನನ್ನು ಗ್ರಾಮಸ್ಥರು ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ: ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

ಇನ್ನು ಮೃತ ಯುವಕ ಉತ್ತರಭಾರತೀಯನಾಗಿದ್ದು ಹೆಸರು ವಿಳಾಸ ಪತ್ತೆಯಾಗಿಲ್ಲ. ಈತ ವನ್ನಲವಾಡಿ ಸಮೀಪ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಜೊತೆಗಾರರಿಬ್ಬರ ಜೊತೆ ಹೋಗುವಾಗ ಗ್ರಾಮಸ್ಥರು ಮಕ್ಕಳ ಕಳ್ಳರು ಎಂದು ಮೂವರನ್ನು ಶಂಕಿಸಿ ಹಿಡಿಯಲು ಮುಂದಾಗಿದ್ದಾರೆ. ಆಗ ಇಬ್ಬರು ತಪ್ಪಿಸಿಕೊಂಡು ಓಡಿಹೋದ್ದಾರೆ.  ಆದರೆ ಈತ ಮಾತ್ರ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದವನನ್ನು ಹಿಗ್ಗಾ-ಮುಗ್ಗಾ ಥಳಿಸಿ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ.

ಈ ಸಂಬಂಧ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವದಂತಿ ಹಿನ್ನೆಲೆಯಲ್ಲಿ ಅಮಾಯಕರನ್ನು ಗ್ರಾಮಸ್ಥರು ಹಿಡಿದು ಹೊಡೆಯುತ್ತಿರುವ ಕಾರಣ ಗುರುವಾರ ಸಂಜೆ ಹೊಸೂರು ಪೊಲೀಸರು ಹೊಸೂರಿನಾದ್ಯಂತ ಇದೊಂದು ವದಂತಿ ಯಾರು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಪ್ರಚಾರ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *