ಜೆಡಿಎಸ್‍ಗೆ MLC ಸಿ.ಆರ್ ಮನೋಹರ್ ಗುಡ್‍ಬೈ – ಡಿ. 2ಕ್ಕೆ ಕಾಂಗ್ರೆಸ್ ಸೇರಲು ನಿರ್ಧಾರ

ಬೆಂಗಳೂರು: ಆಪರೇಷನ್ ಹಸ್ತಕ್ಕೆ ಜೆಡಿಎಸ್ ನಿಂದ ಮೊದಲ ಪತನವಾಗಿದೆ. ಜೆಡಿಎಸ್‍ಗೆ ಎಂಎಲ್‍ಸಿ ಸಿಆರ್ ಮನೋಹರ್ ಗುಡ್‍ಬೈ ಹೇಳಿದ್ದಾರೆ.

ನಿನ್ನೆ ರಾತ್ರಿ ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ ನಿವಾಸಕ್ಕೆ ಬಂದು ರಾಜೀನಾಮೆ ಸಲ್ಲಿಸಿದ್ದಾರೆ. ಸಿ.ಆರ್.ಮನೋಹರ್ ಚಿತ್ರ ನಿರ್ಮಾಪಕ, ಮಾಜಿ ಸಿಎಂ ಕುಮಾರಸ್ವಾಮಿ ಆಪ್ತರಾಗಿದ್ದಾರೆ. ಡಿಸೆಂಬರ್ 2 ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ರಾಜೀನಾಮೆ ಸ್ವೀಕರಿಸಿ ಬಳಿಕ ಮಾತನಾಡಿದ ಹೊರಟ್ಟಿ, ಸಿ.ಆರ್ ಮನೋಹರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವತಃ ಕೊಡ್ತಿರೋ, ಒತ್ತಡಕ್ಕೆ ಕೊಡ್ತಿರೋ ಅಂತ ಕೇಳಿದ್ದೇನೆ. ಆಗ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಈಗಾಗಲೇ ರಾಜೀನಾಮೆಯನ್ನ ಸ್ವೀಕರಿಸಿದ್ದು, ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುತ್ತೇನೆ ಎಂದರು. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

ಇತ್ತ ರಾಜೀನಾಮೆ ನೀಡಿದ ನಂತರ ಮಾತನಾಡಿದ ಸಿ.ಮನೋಹರ್, ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅಸೆಂಬ್ಲಿಗೆ ಹೋಗೋಕೆ ಮನಸ್ಸಿದೆ. ಡಿಸೆಂಬರ್ 2ಕ್ಕೆ ತೀರ್ಮಾನ ಮಾಡಿ ನಿರ್ಧಾರ ಹೇಳುತ್ತೇನೆ. ಪಕ್ಷಕ್ಕೂ ರಾಜೀನಾಮೆಯನ್ನ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸುತ್ತೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *