ನಿನ್ನೆ ಕೋಳಿವಾಡ, ಇಂದು ನಾಯಕರ ವಿರುದ್ಧವೇ ಸಿಡಿದ ಕಾಶಪ್ಪನವರ್!

ಬಾಗಲಕೋಟೆ: ಹುನಗುಂದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಕಣ್ಣೀರು ಹಾಕಿದ್ದಾರೆ. ಇಳಕಲ್ ಸ್ವಗೃಹದಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡರ ವಿರುದ್ಧ ಹರಿಹಾಯ್ದ ಕಾಶಪ್ಪನವರ್ ಬಳಿಕ ಕಣ್ಣೀರು ಸುರಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮಣ್ಣು ಮಾಡುವವರು ಕಾಂಗ್ರೆಸ್‍ನವರೇ. ಪಕ್ಷಕ್ಕಾಗಿ ಏನೂ ಕೆಲಸ ಮಾಡಿಲ್ಲ. ಸಿದ್ದರಾಮಯ್ಯನವರಂತವರನ್ನೇ ಸೋಲಿಸಲು ಹೊರಟಿದ್ದರು. ಅವರು ಅಪ್ಪಂದಿರಿಗೆ ಹುಟ್ಟಿದ್ದಾರೊ ಇಲ್ಲೊ ಗೊತ್ತಿಲ್ಲ ಅಂತ ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್, ಆರ್ ಬಿ ತಿಮ್ಮಾಪುರ ವಿರುದ್ಧ ಗುಡುಗಿದ್ರು.

ನನ್ನ ಸೋಲಿಗೂ ಈ ಇಬ್ಬರೇ ಕಾರಣ. ನನ್ನ ಕ್ಷೇತ್ರಕ್ಕೆ ಒಂದೇ ಒಂದು ಬಾರಿ ಕಾಲಿಡಲಿಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ, ಎಐಸಿಸಿ ಅಧ್ಯಕ್ಷರಿಗೆ ಮಾತನಾಡಿದ್ದೇನೆ ಅಂತ ಆತ್ಮಾವಲೋಕನ ಸಭೆಯಲ್ಲಿ ತಮ್ಮ ಆಕ್ರೋಶ ಹೊಹಾಕಿದ್ರು.

ಇದೇ ವೇಳೆ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟಿಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕಾಶಪ್ಪನವರ್, ನಮ್ಮ ಕಾರ್ಯಕರ್ತರಿಗೆ ಏನಾದರೂ ತೊಂದರೆ ಕೊಟ್ಟರೆ ಸುಮ್ಮನಿರೋದಿಲ್ಲ. ನಾವೇನು ಗಾಂಡುಗಳಲ್ಲ. ನಮ್ಮ ತಂಟೆಗೆ ಬಂದ್ರೆ ನಿನ್ನ ಮನೆಗೆ ನುಗ್ಗೋಕು ನಾವು ರೆಡಿ ಅಂತ ಸವಾಲೆಸೆದಿದ್ದಾರೆ.

Comments

Leave a Reply

Your email address will not be published. Required fields are marked *