ಬೆಳಗಾವಿ: ಕುಂದಾನಗರಿ ಬೆಳಗಾವಿ ಸೇರಿದಂತೆ ಜಿಲ್ಲೆಯ ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳಿಂದ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಬೆಳಗಾವಿ ಗ್ರಾ. ಕ್ಷೇತ್ರ ಸಹ ಪ್ರವಾಹಕ್ಕೆ ತುತ್ತಾಗಿದೆ. ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರಾಶ್ರಿತ ವೃದ್ಧನ ಅಳಲು ಕೇಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ.
ಸ್ಥಳಕ್ಕಾಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಿದ ಕೂಡಲೇ ಶಾಸಕರ ಬಳಿ ಬಂದ ನಂದಿಹಳ್ಳಿ ಗ್ರಾಮದ ವೃದ್ಧ, ಪ್ರವಾಹದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಎಂದು ಕಣ್ಣೀರು ಹಾಕಲು ಆರಂಭಿಸಿದರು. ಅಜ್ಜನ ಮಾತು ಕೇಳಿ ಭಾವುಕರಾದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಇರೋವರೆಗೂ ನೀವೆಲ್ಲ ಹೆದರಬೇಡಿ. ಸರ್ಕಾರದೊಂದಿಗೆ ಮಾತನಾಡಿಸಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಧೈರ್ಯ ತುಂಬಿದರು.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಂದಿಹಳ್ಳಿ ಗ್ರಾಮದ ಈ ಹಿರಿಯ ಮನುಷ್ಯ ತನ್ನ ಮನೆಯನ್ನು ಕಳೆದುಕೊಂಡು ಕಣ್ಣೀರ ಇಡುತ್ತಿರುವುದು ನಿಜಕ್ಕೂ ಎಂತವರ ಕರುಳು ಕೂಡ ಕಿತ್ತು ಬರುವ ಹಾಗೆ ಇತ್ತು, ಅಜ್ಜನಿಗೆ ಧೈರ್ಯವನ್ನು ತುಂಬಿ ಸಂತೈಸಿ, ಪರಿಹಾರದ ಭರವಸೆಯನ್ನು ನೀಡಲಾಯಿತು..!! pic.twitter.com/gD2Rdm2rpa
— Laxmi Hebbalkar (@laxmi_hebbalkar) August 9, 2019
ಪ್ರವಾಹಕ್ಕೆ ಒಳಗಾದ ಪ್ರತಿಯೊಂದ ಗ್ರಾಮಗಳಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡುತ್ತಿದ್ದಾರೆ. ಇನ್ನು ಗಂಜಿ ಕೇಂದ್ರಗಳಿಗೂ ತೆರಳಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಂದಿಹಳ್ಳಿ ಗ್ರಾಮದ ಈ ಹಿರಿಯ ಮನುಷ್ಯ ತನ್ನ ಮನೆಯನ್ನು ಕಳೆದುಕೊಂಡು ಕಣ್ಣೀರ ಇಡುತ್ತಿರುವುದು ನಿಜಕ್ಕೂ ಎಂತವರ ಕರುಳು ಕೂಡ ಕಿತ್ತು ಬರುವ ಹಾಗೆ ಇತ್ತು, ಅಜ್ಜನಿಗೆ ಧೈರ್ಯವನ್ನು ತುಂಬಿ ಸಂತೈಸಿ, ಪರಿಹಾರದ ಭರವಸೆಯನ್ನು ನೀಡಲಾಯಿತು..!! pic.twitter.com/aK4hIh1Bfq
— Laxmi Hebbalkar (@laxmi_hebbalkar) August 9, 2019

Leave a Reply