ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಶಾಸಕ ಆನಂದ್ ಸಿಂಗ್

ಬಳ್ಳಾರಿ: ಹೊಸಪೇಟೆ ಬಂದ್‍ಗೆ ಕರೆ ನೀಡಬೇಡಿ ಎಂದು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ ನಡೆದಿದ್ದರೂ ಇದೂವರೆಗೂ ಕಂಪ್ಲಿ ಶಾಸಕ ಗಣೇಶ್ ಬಂಧನವಾಗದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡು ಬಂದ್‍ಗೆ ಕರೆ ನೀಡಿದ್ದರು. ಗುರುವಾರ ಹೊಸಪೇಟೆ ಬಂದ್ ಮಾಡುವುದಾಗಿ ಆನಂದ್ ಸಿಂಗ್ ಬೆಂಬಲಿಗರು ಜಾಲತಾಣದಲ್ಲಿ ಘೋಷಿಸಿದ್ದರು. ಇದನ್ನೂ ಓದಿ: ರೌಡಿ ಶಾಸಕ ಎಲ್ಲಿ? `ಕೈ’ ಶಾಸಕನನ್ನು ಹುಡುಕದಂತೆ ಸರ್ಕಾರದಿಂದಲೇ ಒತ್ತಡ?

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಆನಂದ್ ಸಿಂಗ್ ಅವರು ಅಭಿಮಾನಿಗಳಿಗೆ ಈ ರೀತಿ ಬಂದ್ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ. ಅಭಿಮಾನಿಗಳು ಯಾರೂ ಈ ಬಗ್ಗೆ ತಪ್ಪು ತಿಳಿಯಬೇಡಿ. ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ನಂತರ ನೀವೆಲ್ಲರೂ ಅಭಿಮಾನಿ ಪ್ರೀತಿ ತೋರಿಸಿದ್ದೀರಿ. ಆರೋಗ್ಯ ವಿಚಾರಿಸಿ ಪ್ರಾರ್ಥನೆ ಮಾಡಿದ್ದೀರಿ. ಇದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಆನಂದ್ ಸಿಂಗ್ ಅವರು ಬೆಂಬಲಿಗರ ಮೂಲಕ ಸಂದೇಶ ರವಾನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *