ಕೇಳಿದ ಸಾಂಗ್ ಹಾಕಿಲ್ಲವೆಂದು ಚಾಕು ಇರಿದ ದುಷ್ಕರ್ಮಿಗಳು..!

ಬೆಂಗಳೂರು: ಕೇಳಿದ ಸಾಂಗ್ ಹಾಕಿಲ್ಲ ಎಂದು ದುಷ್ಕರ್ಮಿಗಳು ಚಾಕು ಇರಿದ ಘಟನೆ ಮಂಗಳವಾರ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಕುವೆಂಪು ನಗರದಲ್ಲಿ ನಡೆದಿದೆ.

ವಿಘ್ನೇಶ್ ವಿಗ್ಗಿ, ಅಜಯ್ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಮ್ಯೂಸಿಷಿಯನ್ ಗಂಗಾಧರ್(26)ಗೆ ಚಾಕು ಇರಿದಿದ್ದಾರೆ.

ಗಣೇಶ ಪೂಜೆಯ ಮೆರವಣಿಗೆ ಸಾಗುತ್ತಿದ್ದಾಗ ತಮಗೆ ಬೇಕಾದ ಸಾಂಗ್ ಹಾಕುವಂತೆ ಆರೋಪಿಗಳು ಕೇಳಿದ್ದರು. ಈ ವೇಳೆ ಗಂಗಾಧರ್ ಆ ಹಾಡು ಇಲ್ಲ ಎಂದು ಹೇಳಿದ್ದಾರೆ. ಬಳಿಕ ಈ ವಿಷಯಕ್ಕಾಗಿ ಇಬ್ಬರು ಆರೋಪಿಗಳು ವಾಗ್ವಾದಕ್ಕೆ ಇಳಿದು ಗಂಗಾಧರ್‍ನನ್ನು ಚಾಕುವಿನಿಂದ ಇರಿದಿದ್ದಾರೆ.

ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *