ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

ಬೆಂಗಳೂರು: ಬೆಳ್ಳಂಬೆಳಗ್ಗೆ ಮೈ ಬೆವರಿಳಿಸಲು ವಾಕಿಂಗ್ ಜಾಗಿಂಗ್ ಎಂದು ಪಾರ್ಕಿಗೆ ಕಾಲಿಟ್ಟವರು ಒಂದು ಕ್ಷಣ ನಡುಗಿ ಹೋಗಿದ್ದರು. ಪಾರ್ಕಿನಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ರಾಶಿ ರಾಶಿ ಹೆಣ ಅಲ್ಲಿ ಬಿದ್ದಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ತೊಂಬತ್ತು ಪಾರಿವಾಳಗಳು ಸಾಲಾಗಿ ಮೃತಪಟ್ಟಿತ್ತು.

ಪಾರಿವಾಳಗಳನ್ನು ನೋಡುವುದಕ್ಕಾಗಿಯೇ ಪಾರ್ಕಿಗೆ ಬರುತ್ತಿದ್ದ ಅವುಗಳು ಸತ್ತು ಬಿದ್ದಿರುವುದನ್ನು ಕಂಡು ಜನ ಕಣ್ಣೀರು ಹಾಕಿದರು. ದಿನನಿತ್ಯ ಕಾಳು ಹಾಕಿ ಖುಷಿಪಡುತ್ತಿದ್ದ ಮಕ್ಕಳು ಇಂದು, ಅಮ್ಮಾ ಪಾರಿವಾಳಗಳು ನಿದ್ದೆ ಮಾಡುತ್ತಿದ್ದಾವಾ ಎಂದು ಮುಗ್ಧವಾಗಿ ಕೇಳುತ್ತಿದ್ದತು. ಬುಲ್ ಟೆಂಪಲ್ ಗಣೇಶ್ ದೇಗುಲದ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಈ ಅಮಾನವೀಯ ದೃಶ್ಯ ಕಂಡುಬಂದಿದೆ.

ರಾತ್ರೋರಾತ್ರಿ ಈ ಪಕ್ಷಿಗಳಿಗೆ ಆಹಾರದಲ್ಲಿ ವಿಷ ಬೆರೆಸಲಾಗಿದೆ. ಕೆಲ ಪಕ್ಷಿಗಳನ್ನು ಕತ್ತು ಕೊಯ್ದು ಸಾಯಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮೂಕ ಪ್ರಾಣಿ ಪಕ್ಷಿಗಳನ್ನು ಅಧಿಕಾರ ದಾಹಕ್ಕಾಗಿ ಚಿತ್ರ ವಿಚಿತ್ರವಾಗಿ ಕೊಲ್ಲಲಾಗುತ್ತದೆ. ಇದು ಕೂಡ ಅಮಾವಾಸ್ಯೆ ದಿನ ನಡೆದ ಕೃತ್ಯವಾಗಿದ್ದು, ವಾಮಾಚಾರದ ಉದ್ದೇಶದಿಂದಲೇ ಸಾಯಿಸಲಾಗಿದೆ ಎಂದು ಜನ ಕಿರಿಕಾಡಿದ್ದಾರೆ.

ಪಾರಿವಾಳಗಳು ಸೇರಿದಂತೆ ಪಾರ್ಕಿನಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಅಷ್ಟು ಪಕ್ಷಿಗಳು ಸಾವನ್ನಪ್ಪಿದೆ. ಜನ ಕಣ್ಣೀರಿಟ್ಟು ಪಾರ್ಕಿನಲ್ಲೇ ಸಮಾಧಿ ಮಾಡಿದರು. ಮೂಕ ಪಕ್ಷಿಗಳನ್ನು ಕೊಲ್ಲುವ ಪ್ರವೃತ್ತಿಯವರೆಗೆ ಮೊದಲು ಶಿಕ್ಷಯಾಗಲಿ ಎಂದು ಜನ ಇದೇ ವೇಳೆ ಆಗ್ರಹಿಸಿದರು.

Comments

Leave a Reply

Your email address will not be published. Required fields are marked *