ಕುತ್ತಿಗೆ ಮೇಲೆ ಕಾಲಿಟ್ಟು ಯುವಕನ ಮೇಲೆ ಐವರಿಂದ ಹಲ್ಲೆ

ಬೆಂಗಳೂರು: ರೌಡಿಗಳು  ಯುವಕನನ್ನು ನೆಲಕ್ಕೆ ಹಾಕಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

ಹರೀಶ್ (25) ಹಲ್ಲೆಗೊಳಗಾದ ಯುವಕ. ಹರೀಶ್ ಪರಪ್ಪನ ಅಗ್ರಹಾರದ ಹೊಸರೋಡು ನಿವಾಸಿಯಾಗಿದ್ದು, ಕಚ್ಚಲು ಬಂದ ಸಾಕು ನಾಯಿಗೆ ಬೈದಿದ್ದಕ್ಕೆ ಶ್ವಾನದ ಮಾಲೀಕರು ಹಾಗೂ ಬಾಡಿಗೆ ರೌಡಿಗಳು ಯುವಕನ ಮೇಲೆ ಹಲ್ಲೆ ನಡೆಸಿದರು.

ಐವರು ದುಷ್ಕರ್ಮಿಗಳ ತಂಡ ಹರೀಶ್‍ನನ್ನು ಥಳಿಸಿ ಕಲ್ಲು ಎತ್ತು ಹಾಕಲು ಮುಂದಾಗಿದ್ದರು. ಹಲ್ಲೆಗೊಳಗಾದ ಹರೀಶ್ ಪ್ರಜ್ಞೆ ಕಳೆದುಕೊಂಡರೂ ದುಷ್ಕರ್ಮಿಗಳು ಬಿಡದೇ ಕಲ್ಲು ಹಾಗೂ ದೊಣ್ಣೆಗಳಿಂದ ಥಳಿಸಿದ್ದಾರೆ. ಹರೀಶ್ ಮೇಲಿನ ಅಮಾನುಷ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಹಲ್ಲೆಯಿಂದ ಹರೀಶ್ ಒಂದು ಕಣ್ಣು ಕಳೆದುಕೊಂಡಿದ್ದು, ಅಲ್ಲದೆ ಸೊಂಟದ ಮೂಳೆಗೆ ಬಲವಾದ ಪೆಟ್ಟು ಬಿದ್ದಿದೆ. ತಲೆಗೆ ಗಾಯವಾಗಿದೆ. ಇಷ್ಟೆಲ್ಲಾ ಆದರೂ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

Comments

Leave a Reply

Your email address will not be published. Required fields are marked *