ಬಾಲಕಿಯನ್ನ ಅಪಹರಿಸಿ, ಕೈ-ಕಾಲು ಕಟ್ಟಿ ಗ್ಯಾಂಗ್ ರೇಪ್

ಭುವನೇಶ್ವರ: ಇಬ್ಬರು ಯುವಕರು 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಬೌಧ್ ನಗರದ ಬಾಪೂಜಿನಗರ ವ್ಯಾಪ್ತಿಯಲ್ಲಿ ನಡೆದಿದೆ.

ಪಿಂಟು ಬಾಧಿಯಾ(25) ಮತ್ತು ತುಕು ಕಂಬಾರ್(24) ಬಂಧಿತ ಆರೋಪಿಗಳು. ಬಾಪೂಜಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಕಟ್ಟಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಆ ಕಟ್ಟಡದಲ್ಲಿಯೇ ಆರೋಪಿ ಯುವಕರಿಬ್ಬರು ಕೂಡ ಕೆಲಸ ಮಾಡುತ್ತಿದ್ದರು.

ಸೋಮವಾರ ಆರೋಪಿಗಳು ನನ್ನ ಮಗಳನ್ನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಯಾರು ಇಲ್ಲದ ವೇಳೆ ಅಪಹರಿಸಿದ್ದಾರೆ. ನಂತರ ಆಕೆಯ ಕೈ, ಕಾಲುಗಳನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಈ ಸಂಬಂಧ ಬೌಧ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಂದು ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *