ಸಮಾಜ ತಿದ್ದುವ ಶ್ರೀಗಳ ಮೇಲೆ ಇಲ್ಲ ಸಲ್ಲದ ಆರೋಪ ಸಲ್ಲದು: ಉಮೇಶ್ ಕತ್ತಿ

ವಿಜಯಪುರ: ಮಠದಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳ ಪರ ಸಚಿವ ಉಮೇಶ್ ಕತ್ತಿ ಬ್ಯಾಟ್ ಬೀಸಿದ್ದಾರೆ.

ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ಮೇಲೆ ಎಫ್‍ಐಆರ್ ಆಗಲ್ಲ. ಆದರೆ ನೋಡೋಣ, ಇದು ಬಸವರಾಜ್ ಹಾಗೂ ಮುರುಘಾ ಶ್ರೀಗಳ ಒಳಜಗಳ ಎಂದರು. ಇದನ್ನೂ ಓದಿ: ಮಠದಲ್ಲಿಲ್ಲ ಮುರುಘಾ ಶ್ರೀಗಳು- ಮೌನಕ್ಕೆ ಜಾರಿದ ಭಕ್ತರು

ಇದರ ಮೇಲೆ ರಾಡಿ ಹಚ್ಚಿ ಎಲ್ಲೆಲ್ಲೂ ಹೋಗ್ತಾ ಇದೆ. ಮುರುಘಾ ಶ್ರೀಗಳ ಮೇಲೆ ಆರೋಪ ಮಾಡಿದ್ದು ತಪ್ಪು. ಇರುವ 2-3 ಶ್ರೀಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರೀಗಳ ಮೇಲೆ ಇಲ್ಲಸಲ್ಲದ ಆರೋಪ ಸಲ್ಲದು ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜವನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಗಬಾರದು. ಜನರನ್ನು ತೊಂದರೆಗೆ ಸಿಲುಕಿಸಬಾರದು. ಕೋರ್ಟ್ ಏನು ಕ್ರಮ ತೆಗೆದುಕೊಳ್ಳುತ್ತದೇ ನೋಡೋಣ ಎಂದು ಕತ್ತಿ ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *