ವಿಡಿಯೋ: ಅಮ್ಮನನ್ನು ನೆನೆದು ಗಳಗಳನೆ ಅತ್ತ ಸಚಿವೆ ಉಮಾಶ್ರೀ

ಬಾಗಲಕೋಟೆ: ನಟಿ ಹಾಗು ಸಚಿವೆಯಾಗಿರುವ ಶ್ರೀಮತಿ ಉಮಾಶ್ರೀ ಅವರು ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನೆದು ದುಃಖ ತಡೆಯಲಾರದೇ ಗಳಗಳನೇ ಕಣ್ಣೀರು ಹಾಕಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಉಮಾಶ್ರೀ ಅವರು, ಪಾರ್ವತಮ್ಮ ಅವರು ನನಗೆ ತಾಯಿಯಾಗಿ, ಅಕ್ಕಳಾಗಿ ಇದ್ದರು. ನಾನು ಶಾಸಕಿ, ಮಂತ್ರಿಯಾದಗಲು ಅವರನ್ನ ಭೇಟಿಯಾಗುತ್ತಿದ್ದೆ, ಆರ್ಶಿವಾದ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ತಾಯಿ ಇಲ್ಲದೇ ನೋವು ಅನುಭವಿಸಿದ ಸಂದರ್ಭದಲ್ಲಿ ಪಾರ್ವತಮ್ಮ ಅವರನ್ನು ತಾಯಿಯಂತೆ ಕಂಡಿದ್ದೇ. ಅವರು ಕೂಡಾ ನನ್ನನ್ನು ಮಗಳಂತೆ ಕಂಡಿದ್ದರು. ನನ್ನಂತಹ ಅನೇಕ ಕಲಾವಿದರಿಗೆ ಆಶ್ರಯ ನೀಡಿದ ಮಹಾತಾಯಿ ಅಮ್ಮ ಎಂದು ಪಾರ್ವತಮ್ಮ ರಾಜಕುಮಾರ್ ಅವರೊಂದಿಗಿನ ಒಡನಾಟವನ್ನು ಸಚಿವೆ ಉಮಾಶ್ರೀ ಸ್ಮರಿಸಿಕೊಂಡರು.

 

Comments

Leave a Reply

Your email address will not be published. Required fields are marked *