ಬಿಜೆಪಿಗೆ ಮತ ಹಾಕ್ತೀಯಾ ಹಾಕೋ ಹೋಗು: ಸಚಿವ ತುಕಾರಾಂ ಸಿಡಿಮಿಡಿ

ಬಳ್ಳಾರಿ: ನನ್ನ ಕೈಯಲ್ಲಾದ ಕೆಲಸ ನಾನು ಮಾಡಿದ್ದೇನೆ. ನನ್ನಿಂದ ಎಲ್ಲರಿಗೂ ಉದ್ಯೋಗ ಕೊಡಿಸಲು ಆಗಲ್ಲ. ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು. ನನಗೆ ಎನೂ ತೊಂದರೆಯಿಲ್ಲ ಎಂದು ಮತದಾರರ ಪ್ರಶ್ನೆಗೆ ಕೆಂಡಾಮಂಡಲರಾಗಿ ಸಚಿವ ತುಕಾರಾಂ ಉತ್ತರಿಸುವ ಮೂಲಕ ಗರಂ ಆಗಿದ್ದಾರೆ.

ಗುರುವಾರ ಸಂಜೆ ಸಂಡೂರು ತಾಲೂಕಿನ ಗಂಗಲಾಪುರ ಗ್ರಾಮದಲ್ಲಿ ಉಗ್ರಪ್ಪ ಪರ ಸಚಿವರು ಪ್ರಚಾರ ನಡೆಸಿದ್ದರು. ಈ ವೇಳೆ ನೀವು ಜಿಂದಾಲ್‍ನಲ್ಲಿ ಯುವಕರಿಗೆ ಉದ್ಯೋಗ ಕೊಡಿಸಲು ಪತ್ರ ಕೊಡುತ್ತಿಲ್ಲ ಎಂದು ಮತದಾರರು ಸಚಿವರನ್ನು ಪ್ರಶ್ನಿಸಿದರು.

ಜಿಂದಾಲ್ ಕಂಪನಿಯಲ್ಲಿ ಎಲ್ಲರೂ ಉದ್ಯೋಗ ಕೇಳಿದ್ರೆ ಹೇಗೆ? ನೀವು ಏಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಾರದು. ಕಲಂ 371 (ಜೆ) ಅಡಿಯಲ್ಲಿ ಸುಮಾರು 33 ಸಾವಿರ ಜನ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ನಾವು ಲೆಟರ್ ನೀಡಿ ನಮ್ಮ ಧರ್ಮವನ್ನು ಪಾಲನೆ ಮಾಡಿದ್ದೇವೆ. ಉದ್ಯೋಗ ನೀಡುವುದು ಕಂಪನಿಗೆ ಸಂಬಂಧಿಸಿದ ವಿಷಯವಾಗಿದೆ. ಇತ್ತೀಚೆಗೆ ಡಿಪ್ಲೋಮಾ, ಐಟಿಐನ ಸುಮಾರು 200 ವಿದ್ಯಾರ್ಥಿಗಳಿಗೆ ಪತ್ರ ನೀಡಿದ್ದು, ಅವರೆಲ್ಲರೂ ಜಿಂದಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಂದಾಲ್ ಕಂಪನಿ ನಂಬಿಕೊಂಡು ಕುಳಿತುಕೊಳ್ಳದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತ ಯುವಕರ ಗಮನ ಹರಿಸಬೇಕಿದೆ ಎಂದರು.

ಈ ವೇಳೆ ತಾಳ್ಮೆ ಕಳೆದುಕೊಂಡ ಸಚಿವ ತುಕಾರಾಂ ನೀನು ಬಿಜೆಪಿಗೆ ಮತ ಹಾಕೋತೀಯಾ ಹಾಕೋ ಹೋಗು ನನಗೇನೂ ತೊಂದರೆ ಇಲ್ಲ ಎನ್ನುವ ಮೂಲಕ ಗರಂ ಆಗಿ ಭಾಷಣ ಮೊಟಕುಗೊಳಿದರು. ಪ್ರಚಾರವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಗಂಗಾಲಪುರ ಗ್ರಾಮದಿಂದ ಹೊರ ನಡೆದರು.

Comments

Leave a Reply

Your email address will not be published. Required fields are marked *